₹44 ಲಕ್ಷ ನೀಡಿದರೆ ತಿರುಮಲದಲ್ಲಿ ಒಂದು ದಿನದ ಅನ್ನಪ್ರಸಾದ ಸೇವೆಗೆ ಅವಕಾಶ: ಟಿಟಿಡಿ

Picture of Savistara

Savistara

Bureau Report

ತಿರುಪತಿ: ತಿರುಪತಿ ತಿರುಮಲ ದೇಗುಲದಲ್ಲಿ ಒಂದು ದಿನ ಅನ್ನದಾನ ಸೇವೆ ನೀಡಲು ಬಯಸುವವರಿಗೆ ಟಿಟಿಡಿ ಅವಕಾಶ ನೀಡಿದೆ. ₹44 ಲಕ್ಷ ದೇಣಿಗೆ ನೀಡಿದರೆ ಒಂದು ದಿನದ ಅನ್ನದಾನ ಸೇವೆ ಮಾಡಬಹುದಾಗಿದೆ.

ಈ ಸೇವೆಗೆ ಪಾವತಿ ಮಾಡಿಸಿದರೆ ಅನ್ನದಾನದ ದಿನ ದಾನಿಗಳೇ ಪ್ರಸಾದ ವಿತರಿಸಬಹುದಾಗಿದೆ. ಅಲ್ಲದೆ ದಾನಿಗಳ ಹೆಸರನ್ನು ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.ಒಂದು ಇಡೀ ದಿನದ ಸೇವೆಯಲ್ಲಿ ಬೆಳಗ್ಗಿನ ಉಪಾಹಾರಕ್ಕೆ ₹10 ಲಕ್ಷ ಹಾಗೂ ಮಧ್ಯಾಹ್ನದ ಊಟಕ್ಕೆ ₹17 ಲಕ್ಷ ಪಾವತಿಸಬೇಕಿದೆ.ಮೂರು ಹೊತ್ತಿನ ಅನ್ನದಾನಕ್ಕೆ ₹44 ಲಕ್ಷ ಪಾವತಿಸಬೇಕಿದೆ.ದೇವರ ದರ್ಶನಕ್ಕಾಗಿ ವಿವಿಧ ದೇಶ, ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರಿಗೆ ರುಚಿಕರವಾದ ಮತ್ತು ಆರೋಗ್ಯಕರವಾದ ಒಂದು ದಿನದ ಅನ್ನಪ್ರಸಾದವನ್ನು ಒದಗಿಸಲು ಟಿಟಿಡಿಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಒಂದು ದಿನದ ದೇಣಿಗೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಟಿಟಿಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

[t4b-ticker]
error: Content is protected !!