ಕೋಮುವಾದದ ಮೂಲ,ಮತ ಗ್ರಂಥಗಳಲ್ಲಿದೆ ಬಿಜೆಪಿ ಮುಖಂಡ ಸಿಟಿ ರವಿ ಆರೋಪ

Picture of Savistara

Savistara

Bureau Report

‘ಕೋಮುವಾದದ ಮೂಲವು ಮತ ಗ್ರಂಥಗಳಲ್ಲೇ ಇದೆ. ‘ಜಿಹಾದ್’ಗೆ ಕರೆ ನೀಡುವ ಮತಗ್ರಂಥ ಕಾಫೀರರನ್ನು ಹೊಡೆಯಿ ಎಂದೂ ಹೇಳುತ್ತದೆ. ಆ ಮತಗ್ರಂಥದ ಮೇಲೆ ಕ್ರಮ ಕೈಗೊಂಡರ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಶಾಂತಿ ನೆಲೆಸುತ್ತದೆ’ ಯೆಂದು ಮಾಜಿ ಸಚಿವ ಸಿಟಿ ರವಿ ಹೇಳಿದರು

‘ಕಾಂಗ್ರೆಸ್ ಮುಖಂಡರು ಮತಬ್ಯಾಂಕ್ ರಾಜಕಾರಣ ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕೆಂಬ ನಿಜವಾದ ಕಳಕಳಿ ಅವರಿಗಿದ್ದರೆ, ಮತೀಯ ದ್ವೇಷ ಬಿತ್ತುವ ಮತಗ್ರಂಥಗಳ ನಿಷೇಧಿಸಲಿ. ಅವುಗಳು ಜಾಗತಿಕ ಕೋಭೆಗೆ, ಭಯೋತ್ಪಾದನೆಗೆ ಎಷ್ಟು ಕೊಡುಗೆ ನೀಡಿವೆ ಎಂದು ವಿಮರ್ಶೆ ಮಾಡಲಿ. ಆಗ ಕೋಮುವಾದಿಗಳು ಯಾರು ಎಂಬ ಸತ್ಯ ಅರ್ಥವಾಗುತ್ತದೆ. ಆ ಸ ಹೇಳುವುದಕ್ಕೆ ಅವರಿಗೆ ಧೈರ್ಯ ಇದೆಯೇ’ ಎಂದು ಪ್ರಶ್ನಿಸಿದರು

‘ದಾಳಿಕೋರರು ದೇಶದ ದೇವಸ್ಥಾನಗಳ ವಿಶ್ವವಿದ್ಯಾಲಯಗಳ ನಾಶಕ್ಕೆ ಆಧಾರವಾಗಿ ಬಳಸಿದ್ದು ಮತಗ್ರಂಥವನ್ನೇ. ಭಯೋತ್ಪಾದ ನಡೆಸಲು ಆಧಾರವಾಗಿದ್ದು ಮತಗ್ರಂಥವೇ. ಪಹಲ್ಕಾಮ್‌ನಲ್ಲಿ ಕೊಲ್ಲುವುದಕ್ಕೂ ಮತಗ್ರಂಥವನ್ನೇ ಆಧಾರವಾಗಿ ಬಳಸಿದರು. ಅಂತಹ ಮತಗ್ರಂಥದಲ್ಲಿ ಮತೀಯ ದ್ವೇಷವನ್ನು ಉಂಟುಮಾಡುವ ಅಂಶಗಳು ಏನಿವೆ ಎಂದು ವಿಮರ್ಶೆ ಆಗಬೇಕಲ್ಲವೇ. ಮಾನವತೆಯ ವಿರುದ್ಧವಾದ ಸಂಗತಿ ಇದ್ದರೆ, ಅದನ್ನು ತೆಗೆದು ಹಾಕಬೇಕೊ ಬೇಡವೋ ಎಂದರು.

[t4b-ticker]
error: Content is protected !!