
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ಗುಜರಾತ್ನ ವಜ್ರದ್ಯಮಿಯೊಬ್ಬರು 11 ಕಿರೀಟಗಳು, ಚಿನ್ನದ ಬಿಲ್ಲು ಬಾಣಗಳು ಸೇರಿದಂತೆ ಹಲವು ಆಭರಣಗಳನ್ನು ದಾನವಾಗಿ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸಿದ್ಧ ಆಭರಣ ಸಂಸ್ಥೆ ಗ್ರೀನ್ ಲ್ಯಾಬ್ನ ಮಾಲೀಕ, ಸೂರತ್ನ ಮುಖೇಶ್ ಪಟೇಲ್ ದೇಗುಲಕ್ಕೆ ದಾನ ಮಾಡಿದ ಆಭರಣಗಳಲ್ಲಿ ಕಂಠಿಹಾರಗಳು, ಕಿವಿಯೋಲೆ, ಚಾಮರಗಳು, ಹಣೆಯ ತಿಲಕ, ಗದೆಗಳು, ಬತ್ತಳಿಕೆ, ಸಹೋದರರ ಪ್ರತಿನಿಧಿಸುವ ಬಾಣಗಳು, 30 ಕೇಜಿ ಬೆಳ್ಳಿ, 300 ಗ್ರಾಂ ಚಿನ್ನ, ಮಾಣಿಕ್ಯಗಳು ಸೇರಿವೆ. ಇವುಗಳನ್ನು ವಿಶೇಷ ವಿಮಾನದ ಮೂಲಕ ಟ್ರಸ್ಟ್ಗೆ ತಲುಪಿಸಲಾಗಿದೆ ಎಂದು ವಿಎಚ್ಪಿ ತಿಳಿಸಿದೆ.













































