
ಸಿಎಂ ಭೇಟಿ ಮಾಡಿ ಅಸಮಾಧಾನ ತೋಡಿಕೊಂಡ ಪರಮೇಶ್ವರ್
ಕ ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಿದ ಪರಮೇಶ್ವರ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇದು ಪೊಲೀಸ್ ವ್ಯವಸ್ಥೆಯ ನೈತಿಕತೆಯನ್ನು ಕೆಣಕಿದೆ. ಗೃಹ ಇಲಾಖೆಯ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಈ ರೀತಿ ನಿರ್ಣಯ ತೆಗೆದುಕೊಳ್ಳುವುದಾದರೆ ತಮ್ಮ ಖಾತೆಯನ್ನೇ ಬದಲಾಯಿಸಿ ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರಂಭದಿಂದಲೂ ಉನ್ನತ ಶಿಕ್ಷಣ ಇಲಾಖೆ ಮೇಲೆ ಒಲವು ಹೊಂದಿದ್ದ ಪರಮೇಶ್ವರ್ ಅವರು, ಈ ಹಿಂದೆ ಡಿಸಿಎಂ, ಎರಡು ಬಾರಿ ಗೃಹ ಇಲಾಖೆ ನಿಭಾಯಿಸಿದ್ದರಿಂದ ಈ ಬಾರಿ ಗೃಹಖಾತೆ ಬೇಡ ಎಂದೇ ಸಿಎಂ ಅವರಲ್ಲಿ ಬೇಡಿಕೆ ಇಟ್ಟಿದ್ದರು. ಆದರೂ ಒಲ್ಲದ ಮನಸ್ಸಿನಿಂದಲೇ ಎರಡು ವರ್ಷಗಳಿಂದ ಗೃಹ ಇಲಾಖೆಯನ್ನು ನಿಭಾಯಿಸಿಕೊಂಡು ಬಂದಿದ್ದರು.
ಅತ್ಯಾಪ್ತರಲ್ಲಿ ಬೇಸರ ಹೊರಹಾಕಿರುವ ಪರಂ
ಆಪ್ತರ ಬಳಿಯೂ ಅಸಮಾಧಾನ ಹೊರಹಾಕಿರುವ ಪರಮೇಶ್ವರ್, ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು, ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್-ಸಿ.ಟಿ.ರವಿ ನಡುವೆ ನಡೆದ ಗಲಾಟೆ ಹಾಗೂ ಅನೇಕ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.













































