ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗಿ

Picture of Savistara

Savistara

Bureau Report

ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಸರ್ವಪಕ್ಷಗಳ ಜಾಗತಿಕ ಔಟ್ ರೀಚ್ ಪ್ರತಿನಿಧಿಯ ಸದಸ್ಯರ ಜೊತೆ ಚರ್ಚೆ ನಡೆಸಿದರು.

ಕಾಂಗ್ರೆಸ್ ನಾಯಕ ಶಶಿ ತರೂರ್,ಗುಲಾಂ ನಬಿ ಅಜಾದ್,ಕನ್ನಿಮೋಳಿ, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕೇಂದ್ರ ಸಚಿವ ಕಿರಣ್ ರಿಜು, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸರ್ವಪಕ್ಷ ನಿಯೋಗದಲ್ಲಿ ವಿವಿಧ ದೇಶಗಳಿಗೆ ತೆರಳಿದ ಸರ್ವ ಪಕ್ಷಗಳ ಸಂಸದರು ಪ್ರಧಾನಿ ಮೋದಿಯನ್ನು ಭೇಟಿಯಾದರು.

ಭಯೋತ್ಪಾದನೆ ವಿಚಾರದಲ್ಲಿ ಭಾರತ ದ ನಿಲುವನ್ನು ಜಗತ್ತಿನ ವಿವಿಧ ದೇಶಗಳಿಗೆ ತಿಳಿಸಿದ ಸಂಸದರಿಗೆ, ರಾಯಭಾರಿ ಪ್ರತಿನಿಧಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪ್ರಧಾನಿ ಮಾತಾನಾಡಿ ವಿವಿಧ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿವಿಧ ನಿಯೋಗಗಳ ಸದಸ್ಯರನ್ನು ಭೇಟಿಯಾಗಿ, ಶಾಂತಿಗೆ ಭಾರತದ ಬದ್ಧತೆ ಮತ್ತು ಭಯೋತ್ಪಾದನೆಯ ಪಿಡುಗನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ವಿವರಿಸಿದೆ. ಅವರು ಭಾರತದ ಧ್ವನಿಯನ್ನು ಮಂಡಿಸಿದ ರೀತಿ ನಮಗೆಲ್ಲರಿಗೂ ಹೆಮ್ಮೆ ತಂದಿದೆಯೆಂದು ತಿಳಿಸಿದ್ದಾರೆ.

[t4b-ticker]
error: Content is protected !!