ರಸ್ತೆ ವ್ಯವಸ್ಥೆಯಿಲ್ಲದೆ ಮಳೆಯ ನಡುವೆ ಮಾಜಿ ಸೈನಿಕನ ಮೃತ ಶರೀರವನ್ನು ಪಾಲದಲ್ಲಿ ಕೊಂಡೊಯ್ದ ಬಂಧುಗಳು |ಗಡಿ ರಕ್ಷಣೆ ಮಾಡಿದ ಯೋಧರ ಊರಲ್ಲಿ ಹೀಗೊಂದು ವ್ಯಥೆ

Picture of Savistara

Savistara

Bureau Report

ಬಾಳುಗೋಡು ಗ್ರಾಮದವರಾಗಿದ್ದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡುರವರುಅಲ್ಪಕಾಲದ ಅಸೌಖ್ಯದಿಂದ ಜು. 2 ರಂದು ಮಂಗಳೂರಿನಲ್ಲಿ ನಿಧನರಾಗಿದ್ದರು‌. ಪ್ರಸ್ತುತ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ನ ಗನ್ ಮನ್ ಆಗಿರುವ ಅವರ ಮೃತ ದೇಹವನ್ನು ಜು 2ರಂದು ಬಾಳುಗೋಡಿನ ಅವರ ಮನೆಗೆ ತರಲಾಗಿತ್ತು. ಆದರೆ ಮನೆಯ ಬಳಿಯ ಲ್ಲಿರುವ ಹೊಳೆಯಲ್ಲಿ ಸಾಕಷ್ಟು ನೀರು ಹರಿವು ಇದ್ದ ಕಾರಣ ಹೊಳೆ ದಾಟುವ ವ್ಯವಸ್ಥೆ ಇಲ್ಲದಾಗಿತ್ತು. ಕೊನೆಯದಾಗಿ ಮಾಜಿ ಯೋಧನ ದೇಹವನ್ನು ಅಡಿಕೆ ಮರದ ಪಾಲದಲ್ಲಿ ಇಬ್ಬರೇ ಹಿಡಿದುಕೊಂಡು ಪಾಲ ಡಾಟಿಸಿ ಮನೆಗೆ ಕೊಂಡೊಯ್ದುರು. ಅಂತ್ಯಸಂಸ್ಕಾರ ವೇಳೆ ಮಾಜಿ ಸೈನಿಕರು ಗೌರವ ವಂದನೆ ಸಲ್ಲಿಸಿದರು. ಜನಪ್ರತಿನಿಧಿಗಳು, ಸ್ಥಳೀಯರು ಉಪಸ್ಥಿತರಿದ್ದರು.

[t4b-ticker]
error: Content is protected !!