ಎಷ್ಯಾ ಕಪ್ ಪಾಕ್ ವಿರುದ್ಧ ಭಾರತಕ್ಕೆ ಗೆಲುವು | ಗೆಲುವನ್ನು ಪಹಲ್ಗಮ್ ಸಂತ್ರಸ್ತರು ಮತ್ತು ಭಾರತೀಯ ಸೈನಿಕರಿಗೆ ಅರ್ಪಿಸಿದ ನಾಯಕ ಸೂರ್ಯ ಕುಮಾರ್

Picture of Savistara

Savistara

Bureau Report

ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುವುದಾಗಿ ಕ್ಯಾಪ್ಟನ್ ಸೂರ್ಯ ಕುಮಾರ್ ಹೇಳಿದ್ದಾರೆವಿನ್ನಿಂಗ್ ಶಾಟ್ ಬಾರಿಸಿ ನಂತರ ಪಾಕ್‌ ಆಟಗಾರರಿಗೆ ಹ್ಯಾಂಡ್‌ಶೇಕ್ ಕೊಡದೆ ಭಾರತೀಯ ಆಟಗಾರರು ಮೈದಾನದಿಂದ ಹೊರ ನಡೆದರು.ಪಂದ್ಯದ ನಂತರ ಮಾತನಾಡಿದ, “ಇದು ಸರಿಯಾದ ಸಮಯ ಮತ್ತು ಸಂದರ್ಭ. ನಾವು ಪಹಾಲ್ಗಾಂ ದಾಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದವರ ಕುಟುಂಬಗಳ ಜೊತೆಗೆ ನಿಲ್ಲುತ್ತೇವೆ ಮತ್ತು ಸಹಾನುಭೂತಿ ತೋರುತ್ತೇವೆ. ಇದಕ್ಕಿಂತ ಮುಖ್ಯವಾಗಿ, ಈ ಗೆಲುವನ್ನು ನಮ್ಮ ಸೇನೆಯ ಧೀರ ಯೋಧರಿಗೆ ಅರ್ಪಿಸುತ್ತೇನೆ, ಇವರು ತಮ್ಮ ಧೈರ್ಯ ಮತ್ತು ಸಾಹಸ ತೋರಿಸಿದ್ದಾರೆ. ನಾವು ನಮ್ಮ ಯೋಧರು ನಮ್ಮನ್ನೆಲ್ಲಾ ಪ್ರೇರೇಪಿಸುವ ಕೆಲಸವನ್ನ ಮುಂದುವರಿಸುತ್ತಾರೆಂದು ಬಯಸುತ್ತೇನೆ ಮತ್ತು ಭವಿಷ್ಯದಲ್ಲಿ ಅವರ ಮುಖದಲ್ಲಿ ಸಂತೋಷ ತರುವಂತೆ ನಾವು ಕೂಡ ಮೈದಾನದಲ್ಲಿ ಪ್ರಯತ್ನಿಸುತ್ತೇವೆ ” ಸೂರ್ಯ ಕುಮಾರ್ ಹೇಳಿದ್ದಾರೆ

[t4b-ticker]
error: Content is protected !!