ಸುಳ್ಯ : ಸೇವಾ ಭಾರತಿ ಹೆಲ್ಪ್ ಲೈನ್ ಹಾಗೂ ನಿವೇದಿತಾ ಮಹಿಳಾ ಜಾಗೃತಿ ವತಿಯಿಂದ ಬಾಲ ಗೋಕುಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

Picture of Savistara

Savistara

Bureau Report

ಸುಳ್ಯ : ಸೆ.20 ರಂದು ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಹಾಗೂ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಆಶ್ರಯದಲ್ಲಿ ಬಾಲ ಗೋಕುಲ ಪ್ರಶಿಕ್ಷಣ ವರ್ಗವು ಸುಳ್ಯದ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದಿ|ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು.

ಪ್ರಾಂತ ಸೇವಾ ಪ್ರಮುಖರಾದ ಸೀತಾರಾಮ್, ಉಮೇಶ್ ಪ್ರಾಂತ ಬಾಲಗೋಕುಲ ಪ್ರಮುಖ್ ವಿಭಾಗ ಸಹ ಸೇವಾ ಪ್ರಮುಖರಾದ ಡಾ|| ಮನೋಜ್ ,ಜಿಲ್ಲೆಯ ಸೇವಾ ಪ್ರಮುಖರಾದ ವಿಜಯ್ ಉಜಿರೆ, ತಾಲೂಕು ಸಂಘ ಚಾಲಕರಾದ ಮಾನ್ಯ ಚಂದ್ರಶೇಖರ ತಳೂರು ಶಿಬಿರಾರ್ಥಿಗಳಿಗೆ ಮಾರ್ಗ ದರ್ಶನ ಮಾಡಿದರು. ತಾಯಂದಿರು, ಮಾತಾಜಿಯವರು, ನಿವೃತ್ತ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುಟಾಣಿ ಮಕ್ಕಳು ಭಾರತಮಾತೆ ಮತ್ತು ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅನುಷ್ಠಾನ ಸಮಿತಿ ಸದಸ್ಯೆ ದಿವ್ಯಲತಾ ಪೇರಾಲ್ ದೇಶಭಕ್ತಿ ಗೀತೆ ಹಾಡಿದರು. ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪುಷ್ಪಮೇದಪ್ಪ ಎಲ್ಲರನ್ನೂ ಸ್ವಾಗತಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು

[t4b-ticker]
error: Content is protected !!