ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ “ನಾಗರೀಕ ದೇವೋಭವ” ಎಂಬ ಐತಿಹಾಸಿಕ ಘೋಷಣೆಯೊಂದಿಗೆ GST ದರವನ್ನು ಇಂದಿನಿಂದ ಕಡಿತಗೊಳಿಸುವ ಈ ಮೂಲಕ ದೇಶದ ಮಹಾಜನತೆಗೆ ದಸರಾ ಮತ್ತು ದೀಪಾವಳಿ ಹಬ್ಬದ ಕೊಡುಗೆ

ನೀಡಿ GST2.0 ಮೂಲಕ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಶಿಕಾರಿಪುರದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಸದ ಬಿ ವೈ ರಾಘವೇಂದ್ರ ಮಾತನಾಡಿದರು.

ಇಂದಿನಿಂದ ಆರಂಭವಾಗಿರುವ ನವರಾತ್ರಿ ಉತ್ಸವದೊಂದಿಗೆ ಪ್ರಧಾನಿಗಳು ಘೋಷಿಸಿದ GST ಉಳಿತಾಯ ಉತ್ಸವದ ಘೋಷಣೆ ದೇಶದ ಎಲ್ಲೆಡೆ ಹಬ್ಬದ ಸಂಭ್ರಮದೊಂದಿಗೆ ಮೊಳಗುತ್ತಿದೆ.

ದೇಶದ ಪ್ರಜೆಗಳು ಈ ಒಂದು ಐತಿಹಾಸಿಕ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ನಿತ್ಯ ಜೀವನಕ್ಕೆ ಅನುಗುಣವಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸಿ,

ಬೆಂಬಲಿಸುವ ಈ ಮೂಲಕ ದೇಶದ ಆರ್ಥಿಕ ಸ್ವಾವಲಂಬನೆ ಹೆಚ್ಚು ಮಾಡಬೇಕು ಎಂಬ ಸಂಕಲ್ಪ ತೊಡಲು ಕರೆ ನೀಡಲಾಯಿತು.











































