ಗುರುಮಠಕಲ್ RSS ಪಥಸಂಚಲನಕ್ಕೆ ಅನುಮತಿ; ಜಿಲ್ಲಾಧಿಕಾರಿಯ 10 ಷರತ್ತುಗಳೇನು?

Picture of Savistara

Savistara

Bureau Report

ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಿಂದಿನ ವಿಧಾನಸಭಾ ಕ್ಷೇತ್ರವಾದ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಜಿಲ್ಲಾಡಳಿತವು ಷರತ್ತುಬದ್ಧ ಅನುಮತಿಯನ್ನು ನೀಡಿದೆ.

ಈ ಹಿಂದೆ ಗುರುಮಠಕಲ್ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಕ್ಟೋಬರ್ 31 ರಂದು ನಡೆಯಲಿರುವ ಈ ಪಥಸಂಚಲನವು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.

ಎಲ್ಲಿಂದ ಎಲ್ಲಿಗೆ ಮೆರವಣಿಗೆ ಹೋಗ್ಬೋದು?

ಆರ್‌ಎಸ್‌ಎಸ್‌ ಮೆರವಣಿಗೆಯು ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಪೊಲೀಸ್ ಠಾಣೆ ರಸ್ತೆ, ಹನುಮಾನ್ ದೇವಸ್ಥಾನ, ಮರಾಠವಾಡಿ, ಮಿಲನ್ ಚೌಕ್ ಮತ್ತು ಸಿಹಿನೀರು ಬಾವಿ ಮಾರುಕಟ್ಟೆ ಮುಖ್ಯ ರಸ್ತೆಯ ಮೂಲಕ ಹಾದುಹೋಗಿ ನಂತರ ರಾಮ್ ನಗರದಲ್ಲಿ ಮೆರವಣಿಗೆ ಕೊನೆಗೊಳ್ಳಿಸಲು ಪೊಲೀಸರು ಅನುಮತಿ ನೀಡಿದ್ದಾರೆ.

ಹತ್ತು ಷರತ್ತುಗಳೇನು?

ರಾಷ್ಟ್ರೀಯ ಸೇವಾ ಸಂಘದ ಶತಮಾನೋತ್ಸವ ಸಮಾರಂಭದದ ಅಂಗವಾಗಿ ಪಥಸಂಚಲನ ಆಯೋಜಿಸಲಾಗಿದೆ. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಒಟ್ಟು ಹತ್ತು ಷರತ್ತುಗಳನ್ನು ವಿಧಿಸಲಾಗಿದೆ. ಇದರಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು, ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಾರದು ಮತ್ತು ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಮಾಡಬಾರದು ಎಂಬ ನಿಯಮಗಳು ಸೇರಿವೆ.

  • ಖಾಸಗಿ ಅಥವಾ ಸರ್ಕಾರಿ ಸಾರ್ವಜನಿಕೆ ಆಸ್ತಿಗೆ ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಮತ್ತು ಅಕಸ್ಮಾತ್‌ ಹಾನಿಯಾದರೆ ಅದರ ನಷ್ಟದ ಹಣ ಭರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
  • ರಾಷ್ಟ್ರೀಯ ಸೇವಾ ಸಂಘದಲ್ಲಿನ ಸ್ವಯಂಸೇವಕರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಜಾತಿ ಅಥವಾ ಧರ್ಮದ ಭಾವನೆಗಳಿಗೆ ನೋವುಂಟು ಮಾಡುವ ಘೋಷಣೆ ಕೂಗದಂತೆ ಕ್ರಮ ವಹಿಸಬೇಕು.
  • ಶಾಂತಿ ಹಾಗೂ ಕೋಮು ಸೌಹಾರ್ದತೆ ಕದಡುವ ಯಾವುದೇ ಚಟುವಟಿಕೆ ಜರುಗಿಸದಂತೆ ಕಟ್ಟುನಿಟ್ಟಿನ ಕ್ರಮ ಹೊರಡಿಸಲಾಗಿದೆ.
  • ಯಾವುದೇ ರಸ್ತೆ ನಿರ್ಬಂಧಿಸುವಂತಿಲ್ಲ. ಅಂಗಡಿಗಳನ್ನು ಬಲವಂತಾವಗಿ ಮುಚ್ಚಿಸುವಂತಿಲ್ಲ. ಮಾರಕ ಆಯುಧ ಹಿಡಿದು ಮೆರವಣಿಗೆ ಸಭೆ ಮಾಡುವಂತಿಲ್ಲ.
  • ಮೆರವಣಿಗೆ, ಸಭೆಯಲ್ಲಿ ಶಾಂತಿ ಕಾಪಾಡಲು ಪೊಲೀಸರ ಬಿಗಿ ಬಂದೋಬಸ್ತ್‌ ಇರಲಿದೆ.
  • ಈ ಷರತ್ತು ಉಲ್ಲಂಘಿಸಿದ್ದಲ್ಲಿ, ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತವು ಸ್ಪಷ್ಟಪಡಿಸಿದೆ.

ನವೆಂಬರ್‌ನಲ್ಲಿ ಪಥಸಂಚಲನಕ್ಕೆ ವಾಗ್ವಾದ

ಕಲಬುರಗಿ ಜಿಲ್ಲೆಯಲ್ಲಿ ಉದ್ವಿಗ್ನತೆ ಮುಂದುವರೆದಿದೆ. ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಮತ್ತು ಇತರ ಒಂಬತ್ತು ಸಂಘಟನೆಗಳು ರ‍್ಯಾಲಿ ನಡೆಸುವ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಶಾಂತಿ ಸಭೆಯು ಯಾವುದೇ ಒಮ್ಮತವಿಲ್ಲದೆ ವಿಫಲಗೊಂಡಿದೆ. ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ಫೌಜಿಯಾ ತರನುಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆರ್‌ಎಸ್‌ಎಸ್‌, ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ಸ್, ಹಸಿರು ಸೇನೆ ಮತ್ತು ಇತರ ಗುಂಪುಗಳ ಪ್ರತಿನಿಧಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಸದ್ಯ ನವೆಂಬರ್‌ 7ಕ್ಕೆ ವಿಚಾರಣೆಯನ್ನು ಹೈ ಕೋರ್ಟ್ ಮುಂದೂಡಿದೆ.

ಆರ್‌ಎಸ್‌ಎಸ್‌ ತನ್ನ ಪಥಸಂಚಲನವನ್ನು ಲಾಠಿ ಮತ್ತು ಕೇಸರಿ ಧ್ವಜದ ಬದಲು ರಾಷ್ಟ್ರಧ್ವಜ ಮತ್ತು ಸಂವಿಧಾನದ ಪೀಠಿಕೆಯನ್ನು ಹಿಡಿದು ನಡೆಸಬೇಕೆಂದು ಹಲವಾರು ಸಂಘಟನೆಗಳು ಒತ್ತಾಯಿಸಿದವು. ಆದರೆ, ಈ ಪ್ರಸ್ತಾಪವನ್ನು ತಿರಸ್ಕರಿಸಿದ ಆರ್‌ಎಸ್‌ಎಸ್‌ ಪ್ರತಿನಿಧಿಗಳು, ತಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುವ ಹಕ್ಕು ತಮಗಿದೆ ಎಂದು ಪ್ರತಿಪಾದಿಸಿದರು.

[t4b-ticker]
error: Content is protected !!