ಬಿಹಾರ ಗೆದ್ದಾಯ್ತು, ಮುಂದೆ ಬಂಗಾಳದ ಸರದಿ: ಕೇಂದ್ರ ಸಚಿವ ಗಿರಿರಾಜ್

Picture of Savistara

Savistara

Bureau Report

ಹೊಸದಿಲ್ಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಆರಂಭಿಕ ವರದಿಗಳ ಪ್ರಕಾರ ಜೆಡಿಯು-ಆರ್‌ಜೆಡಿ ಮೈತ್ರಿಯ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗೆಲುವು ಎನ್‌ಡಿಎಗೆ ನಿಶ್ಚಿತ ಎಂದು ಪ್ರತಿಪಾದಿಸಿದ್ದು, ಪಕ್ಷದ ಮುಂದಿನ ಗೆಲುವು ಪಶ್ಚಿಮ ಬಂಗಾಳದಲ್ಲಿ ಎಂದು ಭವಿಷ್ಯ ನುಡಿದರು.“ಇಲ್ಲಿಯ ಜನರಿಗೆ ಜಂಗಲ್‌ ರಾಜ್‌ ಮತ್ತೆ ಬೇಕಿಲ್ಲ ಎಂದು ಬಿಹಾರವನ್ನು ಅರ್ಥಮಾಡಿಕೊಂಡವರಿಗೆ ಗೊತ್ತಾಗುತ್ತದೆ. ಬಿಹಾರ ನಾಗರಿಕರು ಅರಾಜಕತೆ ಮತ್ತು ಕೆಟ್ಟ ನಾಯಕತ್ವವನ್ನು ತಿರಾಸ್ಕಾರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿ ಮಾತನಾಡುವುದಾದರೆ, ಬಿಹಾರದ ಗೆಲುವು ನಮ್ಮದೆ. ಈಗ ಬಂಗಾಳದ ಸರದಿ” ಎಂದು ಗಿರಿರಾಜ್‌ ಸಿಂಗ್‌ ಹೇಳಿದರು.“ನಾವು ಬಂಗಾಳದಲ್ಲಿಯೂ ಗೆಲುವು ಸಾಧಿಸಲಿದ್ದೇವೆ. ಅಲ್ಲಿರುವ ಸದ್ಯದ ಸರ್ಕಾರವು ಅರಾಜಕತೆಯಿಂದ ಕೂಡಿದ್ದು, ಹೊರ ಅಂಶಗಳಿಂದ ಪ್ರಭಾವಿತವಾಗಿದೆ. ಬಂಗಾಳದ ಜನರು ಅಂತಿಮವಾಗಿ ಸತ್ಯವನ್ನು ಗುರುತಿಸುತ್ತಾರೆ” ಎಂದು ಬಿಹಾರ ಬೆಗುಸರಾಯ್‌ ಕ್ಷೇತ್ರದ ಸಂಸದ ಸಿಂಗ್‌ ಹೇಳಿದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!