ಜ.2ರಿಂದ ಶ್ರೀರಾಮನ ಮೂರ್ತಿ ವೀಕ್ಷಣೆಗೆ ನಿರ್ಬಂಧ

Picture of Savistara

Savistara

Bureau Report

ಕಾರವಾರ: ಇಲ್ಲಿಗೆ ಸಮೀಪದ, ಗೋವಾದ ಕಾಣಕೋಣ ಬಳಿಯಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಜ.2ರಿಂದ ಮಠ ಮತ್ತು ಮಠದ ಆವರಣದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ಶ್ರೀರಾಮನ ಮೂರ್ತಿ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗುತ್ತಿದೆ.

‘ಮಠದ ಆವರಣದ ಅಭಿವೃದ್ಧಿ ಕಾರ್ಯಗಳ ಭಾಗವಾಗಿ ಹಾಗೂ ಶ್ರೀರಾಮನ ಮೂರ್ತಿಯ ಸುತ್ತಮುತ್ತ ರಾಮಾಯಣ ಥೀಮ್ ಆಧರಿಸಿ ‘ಆದರ್ಶ ಧಾಮ’ ನಿರ್ಮಿಸಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾ ಗುವುದು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗುತ್ತಿದೆ’ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

[t4b-ticker]
error: Content is protected !!