ಬಹುಕಾಲದ ಬೇಡಿಕೆಯಾದ ಸುಬ್ರಹ್ಮಣ್ಯ ದೇವರಗದ್ದೆ -ಮಾನಾಡು -ಅಜ್ಜಿಗುಡ್ಡೆ – ನೂಜಿಬೆಟ್ಟು ಮೂಲಕ ಐನೆಕಿದು ಬಾಳುಗೋಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಮಾನಾಡು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಸುಮಾರು 20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಿರು ಸೇತುವೆಯ ಗುದ್ದಲಿ ಪೂಜೆಯನ್ನು ಸುಳ್ಯ ಕ್ಷೇತ್ರದ ಶಾಸಕಿ ಕು | ಭಾಗೀರಥಿ ಮುರುಳ್ಯ ಡಿ.25 ರಂದು ದೀಪ ಬೆಳಗಿಸಿ ತೆಂಗಿನ ಕಾಯಿ ಒಡೆದು ನೆರವೇರಿಸಿದರು.
ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದವೆಂಕಟ್ ವಳಲಂಬೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ ಸುಬ್ರಹ್ಮಣ್ಯ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಕಲ್ಲಾಜೆ, ಸದಸ್ಯರುಗಳಾದ ಗಿರೀಶ್ ಪೈಲಾಜೆ, ಲಲಿತ ಗುಂಡಡ್ಕ, ಮೋಹಿನಿ ಅಂಜನ, ರಾಜೇಶ್ ಎನ್. ಎಸ್, ಭಾರತಿ ಬಿ.ಎನ್, ದಿಲೀಪ್ ಉಪ್ಪಳಿಕೆ, ಸವಿತಾ ಭಟ್, ಹರಿಹರ ಗ್ರಾ ಪಂ. ಮಾಜಿ ಅಧ್ಯಕ್ಷರಾದ ಹಿಮ್ಮತ್ ಕೆ. ಸಿ, ಐನೆಕಿದು ಸುಬ್ರಹ್ಮಣ್ಯ ಸೊಸೈಟಿ ನಿರ್ದೇಶಕರಾದ ಜಯಪ್ರಕಾಶ್ ಕೂಜುಗೋಡು, ಮೋನಪ್ಪ ಮಾನಾಡು,ರಮೇಶ್ ಕೋನಡ್ಕ, ಗಿರಿಯಪ್ಪ ಕೋನಡ್ಕ, ಯಶವಂತ ಕೊಪ್ಪಲಗದ್ದೆ, ಅಜಿತ್ ಕಲ್ಲೇರಿ, ವಿನಯ್ ಅಜಣ, ವಿನೋದ್ ಅಂಜಣ, ಶಶಿಧರ್ ಕತ್ತಿ ಮಜಲು,ಅಶ್ವತ್ ಕೋಡಿಕಜೆ,ಗುರುಕಿರಣ್ ಅಂಜಣ, ರಾಮಚಂದ್ರ ದೇವರಗದ್ದೆ, ನಾಗೇಶ್ ಕಷ್ಕಲ್, ಕುಮಾರ ದಡ್ಡು, ಶೇಷಪ್ಪ ಕತ್ತಿಮಜಲು, ಚಂದ್ರಶೇಖರ ಮಾನಾಡು,ಗಿರಿಯಪ್ಪ ದಡ್ಡು, ಗಧಾದರ ಅಂಜಣ, ಕುಸುಮಾವತಿ ಅಂಜಣ, ಸಾವಿತ್ರಿ, ಲೀಲಾವತಿ ಅಂಜಣ,ಧರ್ಮಪಾಲ ಅಂಜಣ. ಶೇಷಪ್ಪ ಕಲ್ಲುಗುಡ್ಡೆ, ಗಣೇಶ್ ದೇವರಗದ್ದೆ,ಗುತ್ತಿಗೆದಾರ ಮನುದೇವ್ ಪರಮಲೆ,ಪಲಾನುಭವಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.













































