ವಾಚ್‌ಮ್ಯಾನ್ ಆಗಿದ್ದವ ಈಗ ಕೇರಳದ ಕಲ್ಪಟ್ಟಾ ಪುರಸಭೆಯ ಅಧ್ಯಕ್ಷ!

Picture of Savistara

Savistara

Bureau Report

ವಯನಾಡು: ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೇರಳದ ವಯನಾಡು ಜಿಲ್ಲೆಯ ಕಟ್ಟಾ ಪುರಸಭೆಯ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಹೌದು..! ಪನಿಯಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಪಿ. ವಿಶ್ವನಾಥ್‌ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಜಾನಪದ ಗಾಯಕರು ಆಗಿದ್ದಾರೆ.

ಜತೆ ಸಿಪಿಎಂನ ಜಿಲ್ಲಾ ಕಾರ್ಯಕರ್ತರಾಗಿಯೂ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿ ಪರಿಶಿಷ್ಟ ಪಂಗಡದಲ್ಲಿ ಪನಿಯಾ ಸಮುದಾಯ ಒಂದು ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ್ದು, ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ವಿಶ್ವನಾಥ್, ಕಟ್ಟಾ ಪುರಸಭೆಯ ವಾರ್ಡ್ ಸಂಖ್ಯೆ 28 ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಈ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮೀಸಲಾತಿ ಇರುವುದರಿಂದ ವಿಶ್ವನಾಥ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

[t4b-ticker]
error: Content is protected !!