ಜನವರಿ 10,11,12ರಂದು ಪುತ್ತೂರಿನಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಡಿ.ಯನ್ ಚಂದ್ರಶೇಖರ್ ಸುಳ್ಯ ತಾಲೂಕಿನಿಂದ ಆಯ್ಕೆಯಾಗಿದ್ದರೆ ಅಮರಪಡ್ನರೂ ಗ್ರಾಮ ದಲ್ಲಿ ವಾಸವಾಗಿದ್ದು ಕೃಷಿಯಲ್ಲಿ ವಿಶೇಷ ಪ್ರಯೋಗ ಮೂಲಕ ಇವರು ಪರಿಚಿತರು.
ಅತ್ಯುತ್ತಮ ಕೃಷಿಕೂಲಿ
ಕಾರ್ಮಿಕ ಪ್ರಶಸ್ತಿಗೆ ತೀರ್ಥರಾಮ್ ಬೈತಡ್ಕ ರವರು ಆಯ್ಕೆಯಾಗಿದ್ದು ಇವರು ಉಬರಡ್ಕ ಕೃಷಿ ಪತ್ತಿನ ಸಹಕಾರ ಸಂಘ ಸದಸ್ಯರು ಬಡ ಕುಟುಂಬದಲ್ಲಿ ಜನಿಸಿ ತನ್ನ ಎಳೆಯ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡರು ನಂತರ ಚಿಕ್ಕಮ್ಮನ ಆಸರೆಯಾಗಿ ಬೆಳೆದು ಅತ್ಯಂತ ಸಣ್ಣ ವಯಸ್ಸಿನ್ನಲ್ಲಿ ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸವನ್ನು ಪ್ರಾರಂಭಿಸಿದರು.
ಅದರಲ್ಲಿ ಬರುವ ಸಂಭಾವನೆಯಲ್ಲಿ ಮನೆಯ ಖರ್ಚು ವೆಚ್ಚಗಳಿಗೆ ಸಾಲದೇ ಇದ್ದ ಕಾರಣ ನಂತರ ಅಡಿಕೆ ತೆಗಿಯುವ ಕೆಲಸಕ್ಕೆ ಪ್ರಾರಭಿಂಸಿ ಈಗ ಪ್ರಸ್ತುತ 35 ವರ್ಷಗಳಿಂದ ಅಡಿಕೆ ಗೆ ಮದ್ದು ಸಿಂಪಡಿಸುತ್ತಿದ್ದಾರೆ ಅಡಿಕೆ ಕೊಯಿಲು,ತೆಂಗಿನಕಾಯಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ













































