ವಿಧಾನಸಭೆ: ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಗೃಹಲಕ್ಷ್ಮೀಹಣ ಮಹಿಳೆಯರಿಗೆ ಸೇರಿಲ್ಲ, 15 ಸಾವಿರ ಕೋಟಿ ರೂ. ಹಣ ಫಲಾನುಭವಿಗಳಿಗೆ ಪಾವತಿಯಾಗಬೇಕಿದ್ದು, ಸರ್ಕಾರದ ಬಳಿ ದುಡ್ಡಿಲ್ಲವೆಂದರೆ ಸ್ಪಷ್ಟವಾಗಿ ಹೇಳಿ. ಈಗ ಕೊಡಲು ಆಗುವುದಿಲ್ಲ, ಅಮೇಲೆ ಕೊಡುತ್ತೇವೆ ಎಂದಾದರೂ ಹೇಳಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.1 ಕೋಟಿ 24 ಲಕ್ಷ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಿಂದಿನ 2 ತಿಂಗಳ 657 ಕೋಟಿ ರೂ. ಸೇರಿದಂತೆ ಒಟ್ಟು 15 ಸಾವಿರ ಕೋಟಿ ರೂ. ಒದಗಿಸಬೇಕಿದೆ. ಇಂದಿಗೂ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಪಾವತಿಯಾಗಿಲ್ಲ, 6 ತಿಂಗಳುಗಳ ಹಣ ಫಲಾನುಭವಿಗಳಿಗೆ ಪಾವತಿಯಾಗಬೇಕಿದೆ. ಈ ಹಣ ನೀಡಲು ಇಷ್ಟೊಂದು ವಿಳಂಬದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದರು.: ಅಕ್ರಮ ಬಾಂಗ್ಲಾ ನಿವಾಸಿಗಳ ಸಮಸ್ಯೆ ಗಂಭೀರ ಸಮಸ್ಯೆ, ಅವರಿಗೆ ಕೆಲವು ಏಜೆಂಟರು ಆಧಾರ್ ಕಾರ್ಡ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ದೊರಕಿಸುವಲ್ಲಿ ತೊಡಗಿದ್ದಾರೆ. ಈ ಏಜೆಂಟರನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಕೆಲಸ ನಡೆಯಬೇಕು. ಇಲ್ಲವಾದರೆ ಇದು ದೊಡ್ಡ ಅಪಾಯ ಸೃಜಿಸಲಿದೆ ಎಂದು ಹೇಳಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 700 ಬಸ್ ಖರೀದಿಗೆ ಅವಕಾಶ ಕಲ್ಪಿಸಬೇಕು, 150 ಬಸ್ಗಳ ಖರೀದಿಗೆ ಮಾತ್ರ ಟೆಂಡರ್ ಆಗಿದೆ. ಉತ್ತರ ಕರ್ನಾಟಕಕ್ಕೆ ಹಳೆ ಬಸ್ಗಳನ್ನು ನೀಡಲಾಗುತ್ತಿದೆ ಹೊಸ ಬಸ್ಗಳನ್ನು ನೀಡಬೇಕು. ಹುಬ್ಬಳ್ಳಿ ಧಾರವಾಡ ಪಾಲಿಕೆಗೆ ಬಾಕಿ ಇರುವ 300 ಕೋಟಿ ರೂ. ಹಣವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಸೆಪ್ಟೆಂಬರ್ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ : ಶಾಸಕ ಮಹೇಶ ಟೆಂಗಿನಕಾಯಿ
Savistara
Bureau Report
[t4b-ticker]












































