ನಿಂತಿಕಲ್ಲು: ಆರ್ ಎಸ್ ಎಸ್ ಶತಾಬ್ದಿ ಹಿನ್ನಲೆಯಲ್ಲಿ ಪಂಚ ಪರಿವರ್ತನೆ ಉದ್ದೇಶದಿಂದ ಎಣ್ಮೂರು ಮಂಡಲ ವ್ಯಾಪ್ತಿಯ ಮುರುಳ್ಯ, ಎಡಮಂಗಲ, ಎಣ್ಮೂರು ಭಾಗದ ಹಿಂದೂ ಸಂಗಮ ಕಾರ್ಯಕ್ರಮ ನಾಳೆ ಶ್ರೀ ಕೃಷ್ಣ ಲೀಲಾ ಮೈದಾನ ಮುರುಳ್ಯ ದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ,

ಅದಕ್ಕೆ ಮುಂಚಿತವಾಗಿ 3 ಗಂಟೆಗೆ ಕುಕ್ಕೆಟ್ಟೆ ದೇವಳದ ವಠಾರ ದಿಂದ ಭವ್ಯ ಶೋಭಯಾತ್ರೆ ನಡೆಯಲಿದ್ದು ಕೇಸರಿ ಬ್ಯಾನರ್, ಬಂಟಿಂಗ್ಸ್ ಮೂಲಕ ಅದ್ದೂರಿಯಾಗಿ ನಡೆಸಲು

ಕಾರ್ಯಕರ್ತರು ಸಜ್ಜಾಗಿದ್ದು ಸಾವಿರಾರು ಮಂದಿ ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.












































