ಮಂಗಳೂರು: ನಾಗರಕೊವಿಲ್ ಮತ್ತು ಮಂಗಳೂರು ನಡುವೆಕೇರಳದ ತಿರುವನಂತಪುರದ ಮೂಲಕ ಸಂಚರಿಸುವ “ನಾಗರಕೊವಿಲ್ ಜಂಕ್ಷನ್ – ಮಂಗಳೂರು ಜಂಕ್ಷನ್ ಅಮೃತ್ ಭಾರತ್ ವೀಕ್ಲಿ ಎಕ್ಸ್ ಪ್ರಸ್’ ರೈಲಿನ ವೇಳಾಪಟ್ಟಿಗೆ ಹಲವಾರು ಮಂದಿ ರೈಲ್ವೇ ಬಳಕೆದಾರರಿಂದ ಆಕ್ಷೇಪ ವ್ಯಕ್ತವಾಗಿದೆ.ರೈಲು ಸಂಖ್ಯೆ 16329 ಪ್ರತಿ ಮಂಗಳವಾರ ಪೂರ್ವಾಹ್ನ 11.40ಕ್ಕೆ ನಾಗರಕೊವಿಲ್ ಜಂಕ್ಷನ್ ನಿಂದ ಹೊರಟು ಮರುದಿನ ಮುಂಜಾವ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ. ರೈಲು ಸಂಖ್ಯೆ 16330 ಪ್ರತಿ ಬುಧವಾರ ಬೆಳಗ್ಗೆ 8ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಟು ಅದೇ ದಿನ ರಾತ್ರಿ 10.05ಕ್ಕೆ ನಾಗರಕೊವಿಲ್ ಜಂಕ್ಷನ್ ತಲುಪುತ್ತದೆ. ಇದು 8 ಸ್ಟೀಪರ್ಕ್ಲಾಸ್ ಕೋಚ್ ಗಳು, 11 ಜನರಲ್ ಸಕೆಂಡ್ ಕ್ಲಾಸ್ ಕೋಚ್ ಗಳು, 1 ಪ್ಯಾಂಟ್ರಿ ಕಾರ್ಮತ್ತು 2 ಜನರಲ್ ಸೆಕೆಂಡ್ ಕ್ಲಾಸ್ ಕಂ ಲಗೇಜ್ ಬ್ರೇಕ್ ವ್ಯಾನ್ ಕೋಚ್ ಗಳನ್ನು ಒಳಗೊಂಡಿರುತ್ತದೆ.
ಆಕ್ಷೇಪ ಯಾಕೆ?
ಈ ರೈಲು ನಾಗರಕೊವಿಲ್ ಜಂಕ್ಷನ್ ನಿಂದ ಮಂಗಳೂರು ಜಂಕ್ಷನ್ ತಲುಪಲು 17 ಗಂಟೆ 20 ನಿಮಿಷ ತಗಲುತ್ತದೆ. ಸರಾಸರಿ ವೇಗ ಪ್ರತಿ ಗಂಟೆಗೆ 41 ಕಿ.ಮೀ ಇರುತ್ತದೆ. ಇದು ಸಾಮಾನ್ಯ ಲೋಕಲ್ ಪ್ಯಾಸೆಂಜರ್ರೈಲಿನ ವೇಗವಾಗಿದೆ. ಇನ್ನು, ಮಂಗಳೂರಿನಿಂದ ನಾಗರಕೋಯಿಲ್ಗೆ ಹೋಗುವಾಗ 14 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತದೆ. ಇದರ ಸರಾಸರಿ ವೇಗ ಹೆಚ್ಚಿದೆ. ಆದರೆ ಈ ರೈಲು ಹಗಲಿನಲ್ಲಿ ಸಂಚರಿಸುವುದರಿಂದ ಸ್ವೀಪರ್ ಕೋಚ್ ಅನಗತ್ಯ. ಅಲ್ಲದೆ ತಿರುವನಂತಪುರದಿಂದ ಮಂಗಳೂರಿಗೆ ಈ ರೈಲಿನಲ್ಲಿ ಪ್ರಯಾಣದ ಅವಧಿ 15 ಗಂಟೆ 45 ನಿಮಿಷ.ಇದಕ್ಕಿಂತ ಕಡಿಮೆ ಸಮಯದಲ್ಲಿ ಸಂಪೂರ್ಣ ಸಾಮಾನ್ಯ ದರ್ಜೆಯ ಕೋಚ್ ಗಳನ್ನೇ ಹೊಂದಿರುವ ತಿರುವನಂತಪುರ-ಮಂಗಳೂರು ಅಂತ್ಯೋದಯ ಎಕ್ಸಪ್ರಸ್ ರೈಲು ತಿರುವನಂತಪುರದಿಂದ ಮಂಗಳೂರು ತಲುಪುತ್ತದೆ. ಈ ರೈಲು 11 ಗಂಟೆ 50 ನಿಮಿಷ ಮಾತ್ರ ತೆಗೆದುಕೊಳ್ಳುತ್ತದೆ. ಅಮೃತ್ ಭಾರತ್ ರೈಲು ದೂರದ ನಗರಗಳಿಗೆ ಕಡಿಮೆ ಸಮಯದಲ್ಲಿ ಓಡುವ ಸಾಮರ್ಥಯ ಹೊಂದಿದೆ. ಆದರೆ ಅಧಿಕಾರಿಗಳು ಇಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ಷೇಪಗಳು ಕೇಳಿಬಂದಿವೆ.












































