ವಿಜಯಪುರ; ಜನಗಣಮನ ರಾಷ್ಟ್ರಗೀತೆಯಲ್ಲಿ ಬ್ರಿಟಿಷರನ್ನು ಹೊಗಳುವಂತಹ ಶಬ್ದಗಳಿವೆ. ಆದರೆ ವಂದೇ ಮಾತರಂನಲ್ಲಿ ಸಮಗ್ರ ಭಾರತ ಕಲ್ಪನೆ ಇದೆ,” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅಭಿಪ್ರಾಯಪಟ್ಟರು. ಯತ್ನಾಳನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ರಾಷ್ಟ್ರಗೀತೆ ಮಾದರಿಯಲ್ಲಿ ವಂದೇ ಮಾತರಂ ಗೀತೆಗೂ ಗೌರವ ನೀಡಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ,” ಎಂದರು.
”ವಂದೇ ಮಾತರಂನಲ್ಲಿ ಭಾರತದ ಕೃಷಿ, ಕೃಷಿ, ನೈಸರ್ಗಿಕ ಸಂಪತ್ತು ಸೇರಿದಂತೆ ಎಲ್ಲ ವಿಷಯಗಳಿವೆ. ಹಾಗಾಗಿ ಕೇಂದ್ರ ಸರಕಾರ ರಾಷ್ಟ್ರಗೀತೆಗೆ ಸಮನಾಗಿ ಗೌರವ ನೀಡಿದೆ,” ಎಂದರು.ಕಾಂಗ್ರೆಸ್ ಪಕ್ಷದಲ್ಲಿ ಯುದ್ಧ ಆರಂಭ ನಿಜವಾದ ಯುದ್ಧ ಈಗ ಶುರುವಾಗಿದೆ.ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲೆಂದೇ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ಹೋಗಿದ್ದಾರೆ. ಅದಕ್ಕಾಗಿಯೇ ಬಜೆಟ್ ಸಭೆಗೂ ಗೈರು ಹಾಜರಾಗಿದ್ದಾರೆ,” ಎಂದು ಯತ್ನಾಳ ಹೇಳಿದರು. ‘ನಾನು ಸಿಎಂ ಆದರೆ ಮಾತ್ರ ಸರಕಾರ ಉಳಿಯಲಿದೆ ಎಂದು ಸಂದೇಶ ರವಾನಿಸಲು ಡಿಕೆಶಿ ಹೊಸದಿಲ್ಲಿಗೆ ಹೋಗಿರುವುದು ಕಾಂಗ್ರೆಸ್ ಸರ್ಕಾರ ಪತನದ ಮೊದಲ ಹೆಜ್ಜೆಯಾಗಿದೆ,” ಎಂದು ಭವಿಷ್ಯ ನುಡಿದರು.













































