ದಕ್ಷಿಣಕನ್ನಡ ಲೋಕಸಭಾ ಸದಸ್ಯರಾಗಿ ಕ್ಯಾ.ಬ್ರಿಜೇಶ್ ಚೌಟ ಇಂದಿಗೆ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಂಸದರಾಗಿ ಅಧಿಕಾರಿಗಳ ಮಟ್ಟದಲ್ಲಿ ಕೇಂದ್ರ ಸಚಿವರ ಜೊತೆ ನಿಕಟ ಸಂಭಂಧವರಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುವ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ರೈಲ್ವೆ ಕಳೆದ 18 ವರ್ಷಗಳಿಂದ ನೆನೆಗುದಿಗೆ ಬಿದ್ದಿತು ಅದೂ ಮತ್ತೆ ಶುರುವಾಗಿದ್ದು ಸಾವಿರಾರು ಯಾತ್ರಾರ್ಥಿಗಳಿಗೆ ಅನುಕೂಲವಾಗಿದೆ.ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಹಾಗೂ ರಸ್ತೆಗೆ ನೂತನವಾಗಿ ಡಿಪಿಆರ್ ಆ ಯೋಜನೆಗೆ ವೇಗ ನೀಡುವ ಕೆಲಸವಾಗುತ್ತಿದೆ.ಗೇಲ್ ಸಂತ್ರಸ್ತರಿಗೆ ಉದ್ಯೋಗ ಅವಕಾಶ, ಬ್ಯಾಕ್ ಟೂ ಊರು ಕಲ್ಪನೆಯಡಿಯಲ್ಲಿ ಎಂಎಸ್ ಈಜೇಡ್ ಜೊತೆ ಇಟಲಿ ಕಂಪನಿ ಒಪ್ಪಂದ ಮಾಡಿ 1500 ಕೋಟಿ ಹೂಡಿಕೆ ಮೂಲಕ 600 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ,ಬಿಸಿರೋಡು -ಸುರತ್ಕಲ್ ರಸ್ತೆ ಹದೆಗೆಟ್ಟ ಸಂದರ್ಭದಲ್ಲಿ ಡಾಮರೀಕರಣಕ್ಕಾಗಿ 26 ಕೋಟಿ ಅನುದಾನ, ತಲಪಾಡಿ-ಹೆಜಮಾಡಿ ಹೆದ್ದಾರಿ ಮರು ಡಾಮರೀಕರಣ,ಕಲ್ಲಡ್ಕ ಫ್ಲೈ ಓವರ್ ಗೆ ಅಧಿಕಾರ ಮಟ್ಟದಲ್ಲಿ ಫಾಲೋ ಆಫ್ ಮಾಡಿದ ಕಾರಣ ಮಳೆಗಾಲ ಮುಂದೆ ಸಂಚಾರಕ್ಕೆ ತೆರೆದಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇ ಎಸ್ಐ ಆಸ್ಪತ್ರೆ ಮೇಲ್ದರ್ಜೆ ಗೆ ಕೇಂದ್ರ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗಲಿದೆ,ಪ್ರಸಾದ್ ಯೋಜನೆಯಡಿಯಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮತ್ತು ತೋಡಿಕಾನ ದೇವಸ್ಥಾನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಅಧಿಕಾರಿಗಳ ಮಟ್ಟದಲ್ಲಿ ತ್ವರಿತಗತಿಯಲ್ಲಿ ಕೆಲಸ ಮಾಡುವ ಕಾರ್ಯಕ್ಷಮತೆ ಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಂಸದರಾಗಿ ಕ್ಯಾ.ಬ್ರಿಜೇಶ್ ಚೌಟ ಒಂದು ವರ್ಷ ಪೂರ್ಣ | ಹೆದ್ದಾರಿ ಅಭಿವೃದ್ಧಿ,ರೈಲ್ವೆ ವಿಭಾಗಕ್ಕೆ ಆದ್ಯತೆ,ಬ್ಯಾಕ್ ಟೂ ಊರು ಕಲ್ಪನೆಗೆ ಹೊಸ ಆಯಾಮ
Savistara
Bureau Report
[t4b-ticker]













































