
ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಜಾಲಿ-ಭಟ್ಕಳ ಹಾಗೂ ವಿವೇಕ ಜಾಗೃತ ಬಳಗ ಭಟ್ಕಳ ಇದರ ವತಿಯಿಂದ ನಡೆದ ಯೋಗಾರೋಗ್ಯ ವಿಶೇಷ ಕಾರ್ಯಕ್ರಮ ನಡೆಯಿತು.

ವೈದ್ಯರಾದ ಮಾಧವ ಪೈ ರವರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯ ನಿವಾರಣೆಯ ಬಗ್ಗೆ ಉತ್ತಮವಾಗಿ ಸಲಹೆ ನೀಡಿದರು.ಸುಮಾರು 300 ಕ್ಕೂ ಅಧಿಕ ವಿವೇಕಾನಂದ ಅಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದರು.













































