
“ದೇವಾಲಯ ಆಡಳಿತ ಸಂಬಂಧಗಳು ಹೆಚ್ಚಿನ ಸ್ವಾಯತ್ತತೆಯನ್ನು ಪಡೆದಾಗ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯ, ದೊಡ್ಡ ದೇವಾಲಯಗಳು ಭೂಮಿಯನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ಆಸ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವೆಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಸರ್ಕಾರವು ಕನಿಷ್ಠ ಐದು ಪ್ರಮುಖ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ವಿಕೇಂದ್ರೀಕರಿಸಲು ಸಜ್ಜಾಗಿದ್ದು, ಅವುಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಸಿದ್ಧವಾಗಿದೆ ಎಂದು ಸಂದೀಪ್ ಮೌದ್ಗಲ್ ವರದಿ ಮಾಡಿದ್ದಾರೆಂದು ಮುಜರಾಯಿ ಸಚಿವ ಆರ್ ರಾಮಲಿಂಗ ರೆಡ್ಡಿ ಹೇಳಿದರು.5 ದೇವಾಲಯಗಳಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ಘಾಟಿ ಸುಬ್ರಹ್ಮಣ್ಯ, ರೇಣುಕಾ ಯಲ್ಲಮ್ಮ,ಎಂಎಮ್ ಹಿಲ್ಸ್ ದೇವಸ್ಥಾನ,ಚಾಮುಂಡೇಶ್ವರಿ ದೇವಸ್ಥಾನ,ಹುಲಿಗಮ್ಮ ದೇವಸ್ಥಾನ ಸೇರಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರವು ಶೀಘ್ರದಲ್ಲೇ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಿದೆ ಮತ್ತು ಈ ಉದ್ದೇಶಕ್ಕಾಗಿ ಮಾಸ್ಟರ್ ಪ್ಲಾನ್ ಅನ್ನು ಅನುಮೋದಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಗ್ರ ಕುಕ್ಕೆಯ ಅಭಿವೃದ್ಧಿ ಯೋಜನೆಯು 250 ಕೋಟಿ ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ,ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಪ್ರಾಧಿಕಾರ ರಚನೆಯಾದರೆ ದೇವಾಲಯ ಸುತ್ತಮುತ್ತ ಅಭಿವೃದ್ಧಿಯಾಗಲು ಸಾಧ್ಯವಿದೆಯೆಂದು,ಯೋಜನೆ ಗಳನ್ನು ಸಿದ್ದಪಡಿಸಲು ಯಾವುದೇ ಗೊಂದಲಗಳಿರುವುದಿಲ್ಲ ವೆಂದು ಸಾರ್ವಜನಿಕರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.













































