ದಕ್ಷಿಣಕನ್ನಡ ಜಿಲ್ಲೆಯ ಒಕ್ಕಲಿಗ ಸಂಘವು ಸ್ವಜಾತಿ ಬಾಂಧವರಿಗೆ ಜಾತಿ ಗಣತಿ ಸಮೀಕ್ಷೆಯಲ್ಲಿ ಒಕ್ಕಲಿಗ ಅಂತ ನಮೂದಿಸುವಂತೆ ಮತ್ತು ಉಪಜಾತಿ ಕಾಲಂ ಅಲ್ಲೀ ಗೌಡ ಪದ ಹಾಕುವಂತೆ ದಕ್ಷಿಣಕನ್ನಡ ಒಕ್ಕಲಿಗ ಸಂಘ ಮನವಿ ಮಾಡಿದೆ.
ಕೆಲವು ಭಾಗದಲ್ಲಿ ಸಮೀಕ್ಷೆ ನಡೆಸುವವರು ಜನರಲ್ಲಿ ಗೊಂದಲ ಮೂಡಿಸುವಂತ ಮರುಪ್ರಶ್ನೆಯಿಂದಾಗಿ ಕೆಲವು ಮನೆಯವರು ಜಾತಿ ಕಲಂ ನಲ್ಲಿ ಒಕ್ಕಲಿಗ ಅಂತ ಬರೆಸಿಕೊಂಡಾಗ ಜಾತಿ ಕಲಂ ನಲ್ಲಿ ನೀವು “ಗೌಡ”ವೆಂದು ಮರುಪ್ರಶ್ನೆ ಬರುತ್ತಿರುವ ಹಿನ್ನಲೆಯಲ್ಲಿ ಈ ಮನವಿ ಮಾಡಿದೆ,ಅಲ್ಲದೇ ಮಾನ್ಯ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಇಲಾಖೆಯವರಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮೀಕ್ಷೆ ನಡೆಸುವ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಒಕ್ಕಲಿಗ ಪ್ರಮುಖರು ಮನವಿ ಮಾಡಿದ್ದಾರೆ.











































