ಕೇಂದ್ರ ಸರ್ಕಾರವು ರೈತರ ಬೆಳೆಗಳನ್ನು ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ನಷ್ಟದಿಂದ ರಕ್ಷಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ 2026ರಿಂದ ವಿಶೇಷ ಬೆಳೆ ವಿಮಾ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು ಈ ಬಗ್ಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸ್ವಾಗತಿಸಿದ್ದಾರೆ.
2026ರಿಂದ ದೇಶವ್ಯಾಪಿ ಈ ಯೋಜನೆ ರೈತರಿಗೆ ಹೊಸ ವಿಮಾ ರಕ್ಷಣಾ ವ್ಯವಸ್ಥೆಯಾಗಿದ್ದು, ಕಾಡುಪ್ರಾಣಿಗಳ ದಾಳಿಯಿಂದಾಗುವ ಬೆಳೆ ನಷ್ಟಕ್ಕೂ ಪರಿಹಾರ – ಮೊದಲ ಬಾರಿಗೆ ವಿಶೇಷ ಕವಚವನ್ನು ರೂಪಿಸಿದೆ.
72 ಗಂಟೆಗಳಲ್ಲೇ ನಷ್ಟ ಪರಿಶೀಲನೆ – ತ್ವರಿತ ವರದಿ ಮತ್ತು ಕ್ರಮ ಕೈಗೊಳ್ಳಲಿದ್ದು ಕೇಂದ್ರ ಸರ್ಕಾರದಿಂದ ನೇರ ಪರಿಹಾರ ಬಿಡುಗಡೆಯಾಗಲಿದೆ.ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಪ್ರಯೋಜನವಾಗಲಿದೆ – ಗಡಿ ಹಾಗೂ ಅರಣ್ಯ ಪ್ರದೇಶದ ರೈತರಿಗೆ ಹೆಚ್ಚಿನ ನೆರವು ನೀಡುವ ಕಾರ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಮತ್ತೊಂದು ದೊಡ್ಡ ಹೆಜ್ಜೆಯನ್ನಿಟ್ಟಿದೆ ಯೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ











































