ವಿ ಸೋಮಣ್ಣ – ಅಮಿತ್‌ ಶಾ ಭೇಟಿ ಫೋಟೋ ಚರ್ಚೆಗೆ ಗ್ರಾಸ! ’75 ವರ್ಷದ ನೀವು ಕುರ್ಚಿಯಂಚಲಿ ಕೂತು ಬೇಡುವುದೇಕೆ?’

Picture of Savistara

Savistara

Bureau Report

ಬೆಂಗಳೂರು: ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರು ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆ ವೇಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ’75 ವರ್ಷದ ನೀವು ಕುರ್ಚಿಯಂಚಲಿ ಕೂತು ಬೇಡುವುದೇಕೆ?’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.ನವದೆಹಲಿಯ ಸಂಸತ್‌ ಭವನದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ತುಮಕೂರಿನ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ವಿ ಸೋಮಣ್ಣ ಟ್ವೀಟ್‌ ಮಾಡಿ ಫೋಟೋ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಸೋಮಣ್ಣ ಅವರು ಅತಿ ವಿನಯದಿಂದ ಕುರ್ಚಿ ತುದಿಯಲ್ಲಿ ಕುಳಿತು ಕೈ ಮುಗಿದು ಮನವಿ ಮಾಡುತ್ತಿದ್ದಾರೆ. ಅತ್ತ ಅಮಿತ್ ಶಾ ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಾರೆ.ಈ ಫೋಟೋವನ್ನು ಹಲವರು ಹಂಚಿಕೊಂಡು ಹೈಕಮಾಂಡ್‌ ನಾಯಕರ ಪ್ರಭಾವ, ದಕ್ಷಿಣ ಭಾರತ ನಾಯಕತ್ವ ಕೊರತೆ, ಅತಿ ವಿನಯ, ವಯಸ್ಸಿನ ಅಂತರ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ. ವಿ ಸೋಮಣ್ಣ ವರ್ತನೆ ಬದಲಿಸಿಕೊಳ್ಳಲು ಕೆಲವರು ಸಲಹೆ ನೀಡಿದ್ದು, ಹೈಕಮಾಂಡ್‌ ಬಹುಪರಾಕ್ ಸಂಸ್ಕೃತಿ ತಗ್ಗಲಿ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.75 ವರ್ಷದ ನೀವು 61 ವರ್ಷದ ವ್ಯಕ್ತಿಯ ನಿಮ್ಮ ನಡೆ ನೋಡಲು ಸಂಕಟವಾಗುತ್ತೆ!ಈ ಬಗ್ಗೆ ಅಮರನಾಥ್ ಶಿವಶಂಕರ್ ಎಂಬ ಟೆಕ್ಕಿಯೊಬ್ಬರು ಟ್ವೀಟ್‌ ಮಾಡಿದ್ದು, “ಮಾನ್ಯ ಸೊಮ್ಮಣ್ಣ ಅವರೇ – 75 ವರ್ಷ ವಯಸ್ಸಿನ ನೀವು 61 ವರ್ಷದ ವ್ಯಕ್ತಿಯ ಮುಂದೆ ಖುರ್ಚಿಯಂಚಿನಲ್ಲಿ ಕೂತು ಕೈ ಮುಗಿಯುತ್ತ ಇರುವ ಚಿತ್ರ ನೋಡಲು ಸಂಕಟವಾಗುತ್ತೆ. ಹೌದು ಅಧಿಕಾರದಲ್ಲಿ ಅವರು ಪ್ರಬಲರು ಆದರೆ ವಯಸ್ಸಿಗೂ ಮರ್ಯಾದೆ ಇರಬೇಕಲ್ಲವೇ. ದಯವಿಟ್ಟು ಹೀಗೆ ಮಾಡಿ ನಿಮ್ಮನ್ನು ನೀವೇ ಕಡೆಗಣಿಸಿಕೊಳ್ಳಬೇಡಿ ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಭಾರತದಲ್ಲಿ ಬಲಿಷ್ಟ ನಾಯಕರಿಲ್ಲ” ದಕ್ಷಿಣ ಭಾರತದಲ್ಲಿ ಬಲಿಷ್ಠ ನಾಯಕರಿಲ್ಲ. ಉತ್ತರ ಕರ್ನಾಟಕದಲ್ಲಿ ಬಲಿಷ್ಠ ನಾಯಕರಿಲ್ಲ. ದೇವೇಗೌಡರು ಒಬ್ಬರು ಮಾತ್ರ ಪ್ರಧಾನಿಯಾಗಿದ್ದರು ” ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಫೋಟೋಗಳನ್ನು ನೋಡಲು ಕನ್ನಡಿಗರು ಏನು ಪಾಪ ಮಾಡಿದ್ದಾರೆ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.ನನ್ನ ನೆಚ್ಚಿನ ನಾಯಕರು ನೀವು; ಆದರೆ ಯಾಕೆ ಈ ರೀತಿ!” ನನಗೆ ಕರ್ನಾಟಕದ ರಾಜಕಾರಣದಲ್ಲಿ ಇಷ್ಟ ಆಗುವ ಕೆಲವೇ ಕೆಲವು ನಾಯಕರಲ್ಲಿ ನೀವು ಒಬ್ಬರು ಸೋಮಣ್ಣ ಅವರೇ. ನಿಮ್ಮ ಮೇಲೆ ಅಪಾರ ಅಭಿಮಾನ ಇದೇ, ಆದರೆ ಯಾಕೆ ಸ್ವಾಮಿ ಈ ರೀತಿ ಸ್ವಲ್ಪವಾದರೂ ಸ್ವಾಭಿಮಾನವಿಲ್ಲವೇ ??” ಎಂದು ಕೇಳಿದ್ದಾರೆ.ಕೆಲಸಗಾರ ನೀವು ಇಷ್ಟು ಕೀಳರಿಮೆ ಯಾಕೆ?ವಿ ಸೋಮಣ್ಣ ಅವರು ಸಚಿವ ಸಂಪುಟ ಸಹೋದ್ಯೋಗಿಯಾದ ಅಮಿತ್ ಶಾಗೆ ತೋರಿದ ವಿನಯ ಅತಿಯಾಯ್ತು. ಸೋಮಣ್ಣ ಅವರೇ ನೀವು ರಾಜಕಾರಣಿ ಎನ್ನುವುದಕ್ಕಿಂತ ಅತ್ಯುತ್ತಮ ಕೆಲಸಗಾರ. ಒಳ್ಳೆ ಸಂಸದರು. ಇಷ್ಟೆಲ್ಲಾ ಇದ್ದು, ಯಾಕೆ ಇಷ್ಟು ಭಯ, ವಿನಯ, ಕೀಳರಿಮೆ? ಎಂದು ತುಮಕೂರು ಮತದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ

[t4b-ticker]
error: Content is protected !!