Bengal Result 2026: ಮಮತಾ ಬ್ಯಾನರ್ಜಿ ದೋಣಿಯನ್ನು ಮುಳುಗಿಸಿದ್ದೇ ಈ ಇಬ್ಬರು ಮುಸ್ಲಿಂ ನಾಯಕರು! ಮೋದಿ ಮ್ಯಾಜಿಕ್​ ವರ್ಕೌಟ್​?

Picture of Savistara

Savistara

Bureau Report

ಪಶ್ಚಿಮ ಬಂಗಾಳದಲ್ಲಿ (West Bengal) ನಡೆಯುತ್ತಿರುವ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶಗಳ (Assembly Election Result) ಆರಂಭಿಕ ಟ್ರೆಂಡ್‌ಗಳು ರಾಜ್ಯದ ರಾಜಕೀಯ ಚಿತ್ರಣವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸುತ್ತಿರುವ ಸೂಚನೆ ನೀಡುತ್ತಿವೆ. ಇಲ್ಲಿಯವರೆಗೂ 266 ಸ್ಥಾನಗಳ ಟ್ರೆಂಡ್‌ಗಳು ಹೊರಬಿದ್ದಿದ್ದು, ಅವುಗಳ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಭಾರೀ ಹಿನ್ನಡೆ ಎದುರಾಗುತ್ತಿದೆ. ಟಿಎಂಸಿ ಕೇವಲ 112 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಭಾರತೀಯ ಜನತಾ ಪಕ್ಷ (BJP) 150 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ತೀವ್ರ ಸಂಕಷ್ಟದಲ್ಲಿವೆ. ಬಿಜೆಪಿ ನಿರಂತರವಾಗಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಈ ಬಾರಿ ಧ್ವಂಸಗೊಳ್ಳುವ ಸೂಚನೆಗಳಿವೆ.ಮಮತಾ ರಾಜಕೀಯ ಕೋಟೆ ಕುಸಿಯುತ್ತಿದ್ಯಾ?ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಭದ್ರಕೋಟೆ ಕುಸಿಯುತ್ತಿರುವಂತಿದೆ. ಕಳೆದ ಹಲವು ವರ್ಷಗಳಿಂದ ಬಂಗಾಳದಲ್ಲಿ ಬಲಿಷ್ಠ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮಮತಾ, ಈ ಬಾರಿ ಜನರ ಅಸಮಾಧಾನಕ್ಕೆ ಗುರಿಯಾಗಿರುವಂತೆ ಟ್ರೆಂಡ್‌ಗಳು ಸೂಚಿಸುತ್ತಿವೆ. ಚುನಾವಣೆಯಲ್ಲಿ ಕೆಲವು ಸ್ಥಾನಗಳಲ್ಲಿ ತಾಂತ್ರಿಕ ಕಾರಣಗಳಿಂದ ಮರು ಮತದಾನ ನಡೆಯಲಿರುವುದರಿಂದ, ಒಟ್ಟು 294 ಸ್ಥಾನಗಳ ಬದಲಿಗೆ 293 ಸ್ಥಾನಗಳಿಗೆ ಮಾತ್ರ ಮತ ಎಣಿಕೆ ನಡೆಯುತ್ತಿದೆ. ಹೀಗಾಗಿ ಬಹುಮತಕ್ಕೆ 147 ಸ್ಥಾನಗಳು ಬೇಕಾಗುತ್ತವೆ. ಈಗಿನ ಟ್ರೆಂಡ್‌ಗಳನ್ನು ನೋಡಿ ಬಿಜೆಪಿ ಸರಳ ಬಹುಮತಕ್ಕೆ ಅಗತ್ಯವಾದ ಸಂಖ್ಯೆಯನ್ನು ದಾಟಿರುವಂತೆ ಕಾಣುತ್ತಿದೆ.

ಈ ಇಬ್ಬರು ಮುಸ್ಲಿಂ ನಾಯಕರೇ ಕಾರಣ!?ಈ ಬದಲಾವಣೆಯ ಹಿಂದೆ ಟಿಎಂಸಿಯಿಂದ ಹೊರಹಾಕಲ್ಪಟ್ಟ ಇಬ್ಬರು ಮುಸ್ಲಿಂ ನಾಯಕರು ಮಹತ್ವದ ಪಾತ್ರ ವಹಿಸಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಟಿಎಂಸಿಯಿಂದ ಹೊರಗಿದ್ದ ಹುಮಾಯೂನ್ ಕಬೀರ್ ಮತ್ತು ಫಾಲ್ಟಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಹಿಂದೂ ಮತದಾರರ ಭಾವನೆಗಳನ್ನು ಬಲವಾಗಿ ಪ್ರಚೋದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಮಾತುಗಳು ಹಾಗೂ ನಡೆನುಡಿಗಳು ಬಂಗಾಳದ ಹಿಂದೂ ಸಮುದಾಯದಲ್ಲಿ ಪ್ರಭಾವ ಬೀರಿದ್ದು, ಅದರ ಪರಿಣಾಮವಾಗಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆಯೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈಗ ಹೊರಬರುತ್ತಿರುವ ಟ್ರೆಂಡ್‌ಗಳು ಈ ಪ್ರಭಾವವನ್ನು ದೃಢಪಡಿಸುತ್ತಿರುವಂತಿವೆ.l

ಬಿಜೆಪು ಭರ್ಜರಿ ಮುನ್ನಡೆ2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಎಣಿಕೆಯ ನಂತರ ಬಿಜೆಪಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಜಲ್ಪೈಗುರಿ ಜಿಲ್ಲೆಯ ರಾಜ್‌ಗಂಜ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಸರ್ಕಾರ್ ಮುನ್ನಡೆಯಲ್ಲಿದ್ದಾರೆ. ಇದೇ ರೀತಿ ಚಕ್ಡಾ ಮತ್ತು ಕಲ್ಯಾಣಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುಂದಿದ್ದಾರೆ. ಮತ್ತೊಂದೆಡೆ, ಟಿಎಂಸಿ ನಾಯಕ ದೇಬಾಶಿಶ್ ಕುಮಾರ್ ರಾಶ್ ಬಿಹಾರಿ ಕ್ಷೇತ್ರದಲ್ಲಿ ಹಿಂದುಳಿದಿರುವುದು ಟಿಎಂಸಿಗೆ ಮತ್ತೊಂದು ಆಘಾತವಾಗಿದೆ.

ಎಣಿಕೆ ಪ್ರಕ್ರಿಯೆ ನಡುವೆ ರಾಜಕೀಯ ಉದ್ವಿಗ್ನತೆಯೂ ಹೆಚ್ಚಾಗಿದೆ. ಮತಿಗರಾ-ನಕ್ಸಲ್ಬರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಶಂಕರ್ ಮಲಾಕರ್, ಚುನಾವಣಾ ಆಯೋಗದ ಎಣಿಕೆ ಪ್ರಕ್ರಿಯೆ ನಿಧಾನವಾಗಿದೆ ಎಂದು ಪ್ರಶ್ನೆ ಎತ್ತಿದ್ದಾರೆ. ಅವರು ಎಣಿಕೆಯಲ್ಲಿ ಪಾರದರ್ಶಕತೆ ಮತ್ತು ವೇಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದರಿಂದ ಆರೋಪ-ಪ್ರತ್ಯಾರೋಪಗಳ ರಾಜಕೀಯ ವಾತಾವರಣ ಇನ್ನಷ್ಟು ಕಾವೇರಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!