ಕಾಶ್ಮೀರದ ಪಹಲ್ಗಾಮ್ ಲ್ಲಿ ಹಿಂದೂ ಪ್ರವಾಸಿಗರನ್ನು ಜಿಹಾದಿ ಶಕ್ತಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಪರಿವಾರ ಸಂಘಟನೆ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ.

ಅಂಗಡಿ ಮುಂಗಟ್ಟು,ಹೋಟೆಲ್ ಗಳು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಿದ್ದರು.

ಈ ವೇಳೆ ಹಿಂದೂ ಸಂಘಟನಾ ಪ್ರಮುಖರು ಭಯೋತ್ಪಾದಕರನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ನಿವೃತ್ತ ಅಧಿಕಾರಿ ಅಶೋಕ್ ಮೂಲೆ ಮಜಲು, ಉಪನ್ಯಾಸಕ ಪದ್ಮ ಕುಮಾರ್ ಗುಂಡಡ್ಕ ಘಟನೆ ಬಗ್ಗೆ ಮಾತನಾಡಿದರು.
ಹಿಂದೂ ಸಂಘಟನೆ ಪ್ರಮುಖರು,ರಿಕ್ಷಾ ಚಾಲಕರು,ಭಕ್ತಾದಿಗಳು ಉಪಸ್ಥಿತರಿದ್ದರು.













































