ಬೆಂಗಳೂರು: ಸಿನೆಮಾ ಕಲಾವಿದರಾದ “ಸಾಹಸ ಸಿಂಹ’ ಡಾ|ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯವರಿಗೆ “ಕರ್ನಾ ಟಕ ರತ್ನ’ ಪ್ರಶಸ್ತಿ ನೀಡುವುದಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.ಈ ಮೂಲಕ ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಈವರೆಗೆ ನಾಲ್ವರಿಗೆ ರಾಜ್ಯದ ಈ ಅತ್ಯುಚ್ಚ ಪ್ರಶಸ್ತಿ ದೊರೆತಂತಾಗಿದೆ. ಸಿನಿಮಾ, ರಾಜ ಕೀಯ, ವೈದ್ಯಕೀಯ, ವಿಜ್ಞಾನ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಅಸಾಧಾರಣ ಕೊಡುಗೆಯನ್ನು ಸ್ಮರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿ ವಿಶೇಷಗಳು
1992ನೇ ಇಸವಿಯಲ್ಲಿ ಬಂಗಾರಪ್ಪ ಸರಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಆರಂಭ
‘ಕರ್ನಾಟಕ ರತ್ನ’ ಪ್ರಶಸ್ತಿ 50 ಗ್ರಾಂ ತೂಕದ ಚಿನ್ನದ ಪದಕ, ನೆನಪಿನ ಕಾಣಿಕೆಯನ್ನು ಹೊಂದಿದೆ
11 ಮಂದಿ: 1992ರಿಂದ ಈವರೆಗೆ ಒಟ್ಟು 11 ಸಾಧಕರಿಗೆ ಕರ್ನಾಟಕ ರತ್ನ
2ನೇ ಬಾರಿ: ಕುವೆಂಪು, ಡಾ| ರಾಜ್ ಬಳಿಕ ಈಗ ಏಕಕಾಲಕ್ಕೆಇಬ್ಬರಿಗೆ ಪ್ರಶಸ್ತಿ
3 ಮಂದಿ: ಪುನೀತ್ ಬಳಿಕ ಮರಣೋತ್ತರವಾಗಿ ವಿಷ್ಣು, ಸರೋಜಾದೇವಿಗೆ ಪ್ರಶಸ್ತಿ
4 ಮಂದಿ: ಕನ್ನಡ ಚಿತ್ರರಂಗದ ನಾಲ್ವರು ಸಾಧಕರಿಗೆ ಪ್ರಶಸ್ತಿಬಂದಂತಾಗಿದೆ











































