ಕಾಸರಗೋಡು: ‘ಹರ್ ಘರ್ ತಿರಂಗ’ ಅಭಿಯಾನದ ಸಂದರ್ಭದಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವಂತೆ ಕೇರಳಂ ಸರಕಾರ ಸೂಚಿಸಿರುವುದಕ್ಕೆ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ವಿರೋಧ ವ್ಯಕ್ತಪಡಿಸಿದ್ದಾರೆ.ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಕೇರಳಂನಲ್ಲಿ ‘ಈ ಜೀವಿತಾವಧಿಯಲ್ಲಿ’ ಹಾಡುವುದಿಲ್ಲ ಎಂದು ಅವರು ರವಿವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನಿತಾನ್, ಕೇರಳಂ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ನಿರ್ದಿಷ್ಟ ನಿರ್ದೇಶನದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. “ಇಲ್ಲಿಯವರೆಗೆ ಹಾಡಿದ ರೀತಿಯಲ್ಲಿಯೇ ವಂದೇ ಮಾತರಂ ಹಾಡಲಾಗುವುದು ಎಂದು ಹೇಳಿದರು.
“ನರೇಂದ್ರ ಮೋದಿ ನಮ್ಮ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರೂ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವುದಿಲ್ಲ. ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ನಾವು ಈ ಜೀವಿತಾವಧಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಉನ್ನಿತಾನ್ ಹೇಳಿದರು.ರಾಜ್ಯಪಾಲರು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜಭವನಗಳು ‘ಕೀಳು ಮಟ್ಟದ ರಾಜಕೀಯ’ದ ಕೇಂದ್ರಗಳಾಗಿವೆ ಎಂದು ಟೀಕಿಸಿದರು.”ಹಾಗಾದರೆ ರಾಜ್ಯಪಾಲರಿಂದ ನಾವು ಯಾವ ನ್ಯಾಯವನ್ನು ನಿರೀಕ್ಷಿಸಬಹುದು? ಅವರೆಲ್ಲರೂ ಕೇಂದ್ರ ಸರಕಾರದ ಕೈಗೊಂಬೆಗಳಾಗಿ ಬದಲಾಗಿದ್ದಾರೆ” ಎಂದು ಅವರು ಹೇಳಿದರು.








































