ಮಂಗಳೂರಿನಲ್ಲಿ ಒಳನಾಡು ಜಲಸಾರಿಗೆ ಯೋಜನೆ

Picture of Savistara

Savistara

Bureau Report

ಮಂಗಳೂರು : ಮುಂಬೈಯಲ್ಲಿ ನಡೆದ ಇಂಡಿಯಾ ಮೆರಿಟೈಮ್ ವೀಕ್ ಅಧಿವೇಶನದಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯು ಸುಮಾರು 4,500 ಕೋಟಿ ರೂ. ಮೊತ್ತದ ಪ್ರಮುಖ ಒಪ್ಪಂದ ಪತ್ರಗಳಿಗೆ ಸಹಿ ಹಾಕಿದೆ.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಮೇರಿಟೈಮ್ ಕೈಮ್ ವೀಕ್ ದೇಶದ ಅಗ್ರಮಟ್ಟದ ಜಾಗತಿಕ ವೇದಿಕೆ ಆಗಿದ್ದು, ಭಾರತವನ್ನು ಜಾಗತಿಕ ಸಾಗರ ಜಲಸಾರಿಗೆಯ ಕೇಂದ್ರವಾಗಿ ಮತ್ತು ಬ್ಲೂ ಇಕಾನಮಿ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮುನ್ನೋಟ ಪ್ರದರ್ಶಿಸಿದೆ.ಸಂಪರ್ಕ ವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನವೀಕೃತ ಮಾನವ ಸಂಪನ್ಮೂಲ ನಿರ್ಮಾಣ ಕೇಂದ್ರೀಕೃತ ಒಪ್ಪಂದಗಳು ಈ ಅಧಿವೇಶನದಲ್ಲಿ ವಿನಿಮಯಗೊಂಡಿವೆ. ಪಾಟ್ನಾದ ನ್ಯಾಷನಲ್ ಇನ್‌ಲ್ಯಾಂಡ್ ನ್ಯಾವಿಗೇಶನ್ ಇನ್‌ಸ್ಟಿಟ್ಯೂಟ್(ಎನ್ ಐಎನ್‌ಐ) ಸಹಯೋಗದಲ್ಲಿ ಮಂಗಳೂರು ನಗರದಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಒಳನಾಡು ಜಲಸಾರಿಗೆ ಯೋಜನೆ ಮತ್ತು ನ್ಯಾವಿಗೇಶನ್ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ರಾಜ್ಯ ಸರ್ಕಾರ ರಾಜ್ಯದ ಸಮುದ್ರ ಮತ್ತು ಜಲಮಾರ್ಗ ಮಾಸ್ಟರ್ ಪ್ಲಾನ್ ಕುರಿತಾಗಿ ಅಧಿವೇಶನದಲ್ಲಿ ಚರ್ಚಿಸಿದೆ. ಒಟ್ಟು 23 ಸಾವಿರ ಕೋಟಿ ರೂ. ಮೊತ್ತದ 126 ಯೋಜನೆಗಳನ್ನು ಇದು ಒಳಗೊಂಡಿದೆ. ಈ ಪೈಕಿ 7,500 ಕೋಟಿ ರೂ. ವೆಚ್ಚದ 10 ಪ್ರಮುಖ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಗಳು ತಕ್ಷಣ ಆರಂಭಕ್ಕೆ ಸಿದ್ಧವಾಗಿವೆ. ಇವುಗಳಲ್ಲಿ ಮಂಗಳೂರು ವಾಟರ್ ಮೆಟ್ರೋ ಮತ್ತು ರಾಜ್ಯದ ಮೊದಲ ಸಮುದ್ರ ಸಂಗ್ರಹಾಲಯ ಮಂಗಳೂರು ನಗರದಲ್ಲಿ ಸ್ಥಾಪನೆಯಾಗುತ್ತಿದೆ. ಅಧಿವೇಶನದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಮಂಜುಳಾ ಎನ್., ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ, ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಎಚ್‌.ಸಿ., ನಿರ್ದೇಶಕ ದಿವಾಕರ ನಾಯಕ್ ಭಾಗವಹಿಸಿದ್ದರು.

[t4b-ticker]
error: Content is protected !!