ವಿಧಾನಸಭೆಯಲ್ಲಿ 12 ವಿಧೇಯಕಗಳಿಗೆ ಒಪ್ಪಿಗೆ: ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿ ವಿಧೇಯಕವೂ ಅಂಗೀಕಾರ.

Picture of Savistara

Savistara

Bureau Report

ಬೆಳಗಾವಿ: ಕರ್ನಾಟಕ ರಾಜ್ಯ ವಿಧಾನಸಭೆಯು ಮಂಗಳವಾರ ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿ (ಎರಡನೇ ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟು 12 ವಿಧೇಯಕಗಳಿಗೆ ಅಂಗೀಕಾರ ನೀಡಿದೆ.

ಈ ಮಹತ್ವದ ತಿದ್ದುಪಡಿ ವಿಧೇಯಕವು, ರಾಜ್ಯ ರಾಜಧಾನಿಯ ನಿವಾಸಿಗಳಾಗಿದ್ದು, ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವ ಎಲ್ಲ ಸಂಸದರು ಮತ್ತು ಶಾಸಕರನ್ನು ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿಯ (GBA) ಸದಸ್ಯರನ್ನಾಗಿ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಕುರಿತು ಮಾತನಾಡಿ – “ಇಲ್ಲಿನ (ಬೆಂಗಳೂರು) ಮತದಾರರಾಗಿರುವ ಜನಪ್ರತಿನಿಧಿಗಳನ್ನು ಈ ಮೊದಲು ಕೈಬಿಡಲಾಗಿತ್ತು. ನಾವು ಈಗ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಡಾ. ಕೆ. ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳು ಜಿಬಿಎ (GBA) ವ್ಯಾಪ್ತಿಗೆ ಬರುತ್ತವೆ. ಇವರೆಲ್ಲರೂ ಜಿಬಿಎ ಸದಸ್ಯರಾಗಲಿದ್ದಾರೆ. ಈ ತಿದ್ದುಪಡಿಯು ಈ ಕುರಿತಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

[t4b-ticker]
error: Content is protected !!