ಸಿಲ್ಟಾರ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಶನಿವಾರ(ಮಾ14) ಕಿಡಿ ಕಾರಿದ್ದಾರೆ.ಅಸ್ಸಾಂನ ಸಿಲ್ಟಾರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ, ಅದೇ ಸಮಯದಲ್ಲಿ ನಾಗರಿಕರ ಮೇಲೆ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡಲು ನಮ್ಮ ಸರಕಾರ ಕೆಲಸ ಮಾಡುತ್ತಿದೆ” ಎಂದರು.”ಭಾರತದ ತ್ವರಿತ ಅಭಿವೃದ್ಧಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಜಗತ್ತಿನಾದ್ಯಂತದ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಈ ಶಕ್ತಿಗಳ ಕೈಯಲ್ಲಿ ಕೇವಲ ಕೈಗೊಂಬೆಯಾಗುತ್ತಿದೆ.ಭಾರತದ ಅಭಿವೃದ್ಧಿಗೆ ಪ್ರತಿಕೂಲವಾಗಿರುವ ಶಕ್ತಿಗಳ ಕೈಯಲ್ಲಿ ಕಾಂಗ್ರೆಸ್ ಕೈಗೊಂಬೆಯಾಗಿದೆ.ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಈ ಮಹತ್ವದ ಕಾರ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ವಿಫಲವಾಗಿದೆ” ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.ನಮ್ಮ ದೇಶದ ನಾಗರಿಕರು ಸಾಧ್ಯವಾದಷ್ಟು ಕಡಿಮೆ ಸಮಸ್ಯೆಗಳನ್ನು ಎದುರಿಸುವಂತೆ ನೋಡಿಕೊಳ್ಳಲು ನಮ್ಮ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಯುದ್ದದ ಪರಿಣಾಮವನ್ನು ದೇಶದ ನಾಗರಿಕರ ಮೇಲೆ ಕಡಿಮೆ ಮಾಡುವುದು ನಮ್ಮ ಉದ್ದೇಶ. ಈ ನಿರ್ಣಾಯಕ ಹಂತದಲ್ಲಿ, ಕಾಂಗ್ರೆಸ್ ಪಕ್ಷವು ಜವಾಬ್ದಾರಿಯುತ ರಾಜಕೀಯ ಪಕ್ಷದ ಪಾತ್ರವನ್ನು ಪೂರೈಸುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಅದು ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಪ್ರಧಾನಿ ಹೇಳಿದರು.
ಮಧ್ಯಪ್ರಾಚ್ಯ ಸಂಘರ್ಷ;ಕಾಂಗ್ರೆಸ್ ಭಾರತ ವಿರೋಧಿ ಶಕ್ತಿಗಳ ಕೈಗೊಂಬೆ: ಮೋದಿ ವಾಗ್ದಾಳಿ
Savistara
Bureau Report
[t4b-ticker]













































