ಕೇರಳ ಚುನಾವಣೆ: ಎನ್‌ಡಿಎ ಪ್ರಣಾಳಿಕೆ ಬಿಡುಗಡೆ: ವರ್ಷಕ್ಕೆ ಎರಡು ಉಚಿತ ಸಿಲಿಂಡರ್, ₹3000 ಪಿಂಚಣಿ ಹಾಗೂ ಏಮ್ಸ್ ಭರವಸೆ..!

Picture of Savistara

Savistara

Bureau Report

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ತನ್ನ ವರ್ಚಸ್ಸು ಹೆಚ್ಚಿಸಲು ಮುಂದಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿ, ರಾಜ್ಯದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಲವು ಜನಪ್ರಿಯ ಭರವಸೆಗಳನ್ನು ನೀಡಿದ್ದಾರೆ.

ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು:

  • ಮಹಿಳಾ ಸಬಲೀಕರಣ ಮತ್ತು ಪಿಂಚಣಿ: ಬಡ ಕುಟುಂಬಗಳ ಮಹಿಳಾ ಮುಖ್ಯಸ್ಥೆಯರಿಗೆ, ವಿಧವೆಯರಿಗೆ ಮತ್ತು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ ₹3,000 ಪಿಂಚಣಿ ನೀಡುವುದಾಗಿ ಭರವಸೆ ನೀಡಲಾಗಿದೆ.
  • ಆರೋಗ್ಯ ಸುರಕ್ಷಾ ಕಾರ್ಡ್: ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಮಾಸಿಕ ₹2,500 ರೀಚಾರ್ಜ್ ಸೌಲಭ್ಯವಿರುವ ‘ಭಕ್ಷ್ಯ ಆರೋಗ್ಯ ಸುರಕ್ಷಾ ಕಾರ್ಡ್’ ನೀಡಲಾಗುವುದು. ಇದನ್ನು ಔಷಧ ಮತ್ತು ದಿನಸಿ ಖರೀದಿಗೆ ಬಳಸಬಹುದು.
  • ಉಚಿತ ಸೌಲಭ್ಯಗಳು: ಪ್ರತಿ ಮನೆಗೆ 20,000 ಲೀಟ‌ರ್ ಉಚಿತ ನೀರು ಮತ್ತು ಬಡ ಕುಟುಂಬಗಳಿಗೆ ವರ್ಷಕ್ಕೆ ಎರಡು ಉಚಿತ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು (ಓಣಂ ಮತ್ತು ಕ್ರಿಸ್‌ಮಸ್‌ ಸಮಯದಲ್ಲಿ) ನೀಡುವುದಾಗಿ ಘೋಷಿಸಲಾಗಿದೆ.
  • ಮೂಲಸೌಕರ್ಯ ಮತ್ತು ಆರೋಗ್ಯ: ಕೇರಳಕ್ಕೆ ಬಹುನಿರೀಕ್ಷಿತ ‘ಏಮ್ಸ್’ (AIIMS) ಆಸ್ಪತ್ರೆ ತರುವುದು ಹಾಗೂ ರಾಜಧಾನಿ ತಿರುವನಂತಪುರಂ ಮತ್ತು ಕಣ್ಣೂರು ನಡುವೆ ಹೈಸ್ಪೀಡ್ ರೈಲು ಜಾಲ ನಿರ್ಮಿಸುವ ವಾಗ್ದಾನ ಮಾಡಲಾಗಿದೆ.
  • ಮುಲ್ಲಪೆರಿಯಾರ್ ಸಮಸ್ಯೆ: ತಮಿಳುನಾಡಿಗೆ ನೀರು ಹಾಗೂ ಕೇರಳಕ್ಕೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟು ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಲಾಗಿದೆ.

ಧಾರ್ಮಿಕ ಪೂಜಾ ಸ್ಥಳಗಳ ರಕ್ಷಣೆ:

  • ಶಬರಿಮಲೆ ಮತ್ತು ಗುರುವಾಯೂರು ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ರಕ್ಷಣೆಗೆ ಎನ್‌ಡಿಎ ಆದ್ಯತೆ ನೀಡಿದೆ.
  • ದೇವಸ್ವಂ ಮಂಡಳಿಗಳನ್ನು ನವೀಕರಿಸಿ ಭಕ್ತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
  • ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನದ ಬಗ್ಗೆ ಕಾಲಮಿತಿಯ ಸಿಬಿಐ ತನಿಖೆ ನಡೆಸುವುದು.
  • ಶಬರಿಮಲೆಯಲ್ಲಿ ಭಕ್ತರಿಗಾಗಿ ಮೂಲಸೌಕರ್ಯ ವೃದ್ಧಿಸಲು ‘ಶಬರಿಮಲೆ ಅಭಿವೃದ್ಧಿ ಮಿಷನ್’ ಸ್ಥಾಪನೆ.

ಎದುರಾಳಿಗಳ ವಿರುದ್ಧ ವಾಗ್ದಾಳಿ:

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ನಿತಿನ್ ನವೀನ್, ಕೇರಳವನ್ನು ದಶಕಗಳ ಕಾಲ ಆಳಿದ ಎಲ್‌ಡಿಎಫ್ (LDF) ಮತ್ತು ಯುಡಿಎಫ್‌ (UDF) ಮೈತ್ರಿಕೂಟಗಳು ರಾಜ್ಯದ ಆರ್ಥಿಕತೆಯನ್ನು ಹಳ್ಳ ಹಿಡಿಸಿವೆ ಎಂದು ಟೀಕಿಸಿದರು. ಎರಡೂ ಪಕ್ಷಗಳು ‘ಮ್ಯಾಚ್ ಫಿಕ್ಸಿಂಗ್’ ಆಟ ಆಡುತ್ತಿದ್ದು. ಕೈಗಾರಿಕಾ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಅವರು ಆರೋಪಿಸಿದರು.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!