ದಾವಣಗೆರೆ: ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ. ಕರಿಬಸಮ್ಮ ಅವರು ಸೈನಿಕರ ಕಲ್ಯಾಣ ನಿಧಿಗೆ ₹ 10 ಲಕ್ಷ ದೇಣಿಗೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಸೋಮವಾರ ಭೇಟಿಯಾಗಿ ತಮ್ಮ ಸ್ವಂತ ಮನೆ ಮಾರಾಟದಿಂದ ಹಾಗೂ ಪಿಂಚಣಿಯಿಂದ ಬಂದಿದ್ದ * 10 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.’ನಿರಂತರ ಹೋರಾಟಗಳ ಪರಿಣಾಮ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದೇನೆ. ದೇಶದ ಸೈನಿಕರಿಗೆ ಸಹಾಯ ಮಾಡಬೇಕೆಂಬ ತುಡಿತ ಇತ್ತು. ಅನಾರೋಗ್ಯದ ಕಾರಣ ಆದಷ್ಟು ಬೇಗ ಹಣವನ್ನು ದೇಶಕ್ಕೆ ಸಮರ್ಪಿಸಿ ಋಣಮುಕ್ತಳಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಕರಿಬಸಮ್ಮ ಹೇಳಿದರು.’ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ‘ಭಾರತ್ ಕೆ ವೀರ್’ಗೆ ದೇಣಿಗೆಯ ಮೊತ್ತ ವರ್ಗಾಯಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
86 ವರ್ಷದ ಕರಿಬಸಮ್ಮ ಸದ್ಯ ವೃದ್ಧಾಶ್ರಮವೊಂದರಲ್ಲಿ ನೆಲೆಸಿದ್ದಾರೆ.










































