ದೊಡ್ಡತೋಟ -ಮರ್ಕಂಜ ರಸ್ತೆ ಕಾಮಗಾರಿ | ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರ್ಯಾಯ ರಸ್ತೆ ಕಲ್ಪಿಸಿದ ಕೆಎಸ್ಆರ್ ಟಿ ಸಿ,ವಿದ್ಯಾರ್ಥಿಗಳ ಸಂತಸ

Picture of Savistara

Savistara

Bureau Report

ಸುಳ್ಯ :ದೊಡ್ಡ ತೋಟ ಮರ್ಕಂಜ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಬಸ್ಸಿನ ಸಂಚಾರ ಕೆಲವೊಂದು ವ್ಯತ್ಯಾಸ ಆದ ಕಾರಣ ಶಾಲಾ ವಿದ್ಯಾರ್ಥಿಗಳು ಬಸ್ಸಿನ ತೊಂದರೆಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ನಿನ್ನೆ ಸರ್ಕಾರಿ ಬಸ್ಸು ಸುಳ್ಯದಿಂದ ಹೊರಟು ಎಲಿಮಲೆಯಾಗಿ ಮರ್ಕಂಜ ಕ್ಕೆ ಬಂದು ವಿದ್ಯಾರ್ಥಿಗಳನ್ನು ಇಳಿಸಿದ ಸಂದರ್ಭದಲ್ಲಿ ಮಕ್ಕಳು ಅಲ್ಲಿಂದ ನಡೆದುಕೊಂಡು ಅದಲ್ಲದೆ ಖಾಸಗಿ ವಾಹನದಲ್ಲಿ ಬರುವಂತಹ ಸಮಸ್ಯೆ ಎದುರಾಯಿತು. ಈ ಬಗ್ಗೆ ಕೆಲವೊಂದು ವಿದ್ಯಾರ್ಥಿಗಳ ಪೋಷಕರು ಸಾಮಾಜಿಕ ಕಾರ್ಯಕರ್ತ ಜಗನ್ನಾಥ್ ಜಯನಗರ ರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸಹಕಾರ ಕೊಡಬೇಕು ಅಂತ ಕೇಳಿದ ಮೇರೆಗೆ ಜಗನ್ನಾಥ್ ರವರು ಸಂಬಂಧಪಟ್ಟ ಇಲಾಖೆಗೆ ಸುಳ್ಯ ಡಿಪೋ ಮ್ಯಾನೇಜರ್ ಮತ್ತು ಪುತ್ತೂರು ವಿಭಾಗಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಬಸ್ಸಿನ ವ್ಯವಸ್ಥೆಯನ್ನು ಮರ್ಕಂಜಕ್ಕೆ ಬಂದು ಮಿತಡ್ಕ, ಬೊಮ್ಮರ್ ಮಾರ್ಗವಾಗಿ ರೆಂಜಾಳ ದೇವಸ್ಥಾನದಲ್ಲಿ ತಂಗವಂತೆ ಮತ್ತು ಮರುದಿನ ಕೊರತ್ತೋಡಿಯಿಂದ ಮತ್ತು ಹೈದಂಗೂರುನಿಂದ ಬರುವಂತಹ ವಿದ್ಯಾರ್ಥಿಗಳಿಗೆ ರೆಂಜಾಳದಲ್ಲಿ ಸಹಕರಿಸುವಂತೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಡಿಪ್ಪೋ ಮೆನೇಜರ್ ರವರಿಗೆ ತಿಸಿಳಿದರು ಈ ಬಗ್ಗೆ ವ್ಯವಸ್ಥೆ ಯನ್ನು ಕೆ ಎಸ್ ಆರ್ ಟಿ ಸಿ ವಿಭಾಗ ಕಲ್ಪಿಸಿದ್ದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

[t4b-ticker]
error: Content is protected !!