ರಾಜ್ಯದಲ್ಲಿ ಮುಂಗಾರು ದುರ್ಬಲ: ಬಿತ್ತನೆ ವಿಳಂಬ
ಬೆಂಗಳೂರು, ಜೂನ್ 26- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಕ್ಷೀಣಿಸಿ ದಕ್ಷಿಣ ಒಳನಾಡಿನಲ್ಲಿ ಮಳೆ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಕೆಲವೆಡೆ ಬಿತ್ತನೆ ವಿಳಂಬವಾಗುತ್ತಿದ್ದರೆ, ಈಗ ಮಾಡಿರುವ ಬಿತ್ತನೆ ಕೂಡ ಒಣಗುತ್ತಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ.ಮುಂಗಾರು ಆರಂಭದ ಮಳೆಯು ವಿಫಲವಾದ ಕಾರಣದಿಂದ ಈ ಸಮಯದಲ್ಲಿ ಆಗಿರಬೇಕಿದ್ದ ವಾರ್ಷಿಕ ಮುಂಗಾರು ಬಿತ್ತನೆಯಲ್ಲಿ ಶೇ 60ರಷ್ಟು ಪ್ರದೇಶಗಳಲ್ಲಿ ಬಿತ್ತನೆಯಾಗಿಲ್ಲ.
ನ್ಯಾ. ಎನ್. ವೆಂಕಟಾಚಲ ರಾಜ್ಯ ಲೋಕಾಯುಕ್ತರಾಗಿ ನೇಮಕ
ಬೆಂಗಳೂರು, ಜೂನ್ 26- ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರನ್ನು ರಾಜ್ಯ ಲೋಕಾಯುಕ್ತರನ್ನಾಗಿ ನೇಮಿಸಿ ರಾಜ್ಯಪಾಲರಾದ ವಿ.ಎಸ್.ರಮಾದೇವಿ ಇಂದು ಆದೇಶ ಹೊರಡಿಸಿದ್ದಾರೆ.ಇತ್ತೀಚೆಗೆ ನಿವೃತ್ತರಾದ ಲೋಕಾಯುಕ್ತ ಹಕೀಂ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಅವರು ನೇಮಕಗೊಂಡಿದ್ದಾರೆ.











































