ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿ ಬರೋಬ್ಬರಿ ಏಳು ತಿಂಗಳು ಕಳೆದರೂ ಪತ್ತೆಯಾಗದಿರುವುದು ತನಿಖಾ ಸಂಸ್ಥೆಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಪ್ರಕರಣ ಮುಖ್ಯಾಂಶಗಳು:
ನಾಪತ್ತೆಯಾದ ಹಿನ್ನೆಲೆ: ಜನವರಿ 31 ರಂದು ಪರೀಕ್ಷೆಯ ಭಯದಿಂದ ತಪ್ಪಿಸಿಕೊಳ್ಳಲು ಕೇವಲ ₹3,000 ಹಣದೊಂದಿಗೆ ಇಬ್ಬರೂ ಮನೆ ಬಿಟ್ಟು ತೆರಳಿದ್ದರು.
ಡಿಜಿಟಲ್ ಸುಳಿವೇ ಇಲ್ಲ: ಯುವತಿಯರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್ ಬಳಸುತ್ತಿಲ್ಲ. ಆಧಾರ್ ಕಾರ್ಡ್ ಬಳಸಿ ಉಚಿತ ಬಸ್ನಲ್ಲಿ ಪ್ರಯಾಣಿಸಿದ ಸುಳಿವು ಬಿಟ್ಟರೆ ಬೇರೆ ಯಾವುದೇ ಸುಳಿವು ಸಿಕ್ಕಿಲ್ಲ.
ಕೊನೆಯ ಸುಳಿವು: ಇಬ್ಬರೂ ಕೊನೆಯದಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿಂದ ಮುಂದೆ ಏನಾದರು ಎಂಬುದು ನಿಗೂಢವಾಗಿದೆ.
ಸಿಐಡಿ ತನಿಖೆ: ಪೊಲೀಸರಿಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಕಳೆದ 3 ತಿಂಗಳ ಹಿಂದೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಮಾನವ ಕಳ್ಳಸಾಗಣೆ ಶಂಕೆ: ಇಷ್ಟೊಂದು ಸುದೀರ್ಘ ಅವಧಿಯವರೆಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಯುವತಿಯರು ಮಾನವ ಕಳ್ಳಸಾಗಣೆ (Human Trafficking) ಜಾಲಕ್ಕೆ ಸಿಲುಕಿರಬಹುದೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.















































