ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಗಳ ಕ್ರಾಂತಿ: ಬೈಂದೂರು ಕ್ಷೇತ್ರದಲ್ಲಿ ₹5.20 ಕೋಟಿ ವೆಚ್ಚದ ಕಾಮಗಾರಿಗಳ ಪರಿಶೀಲಿಸಿದ ಸಂಸದ ಬಿ.ವೈ. ರಾಘವೇಂದ್ರ!

Picture of Savistara

Savistara

Bureau Report

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಡ ಹಾಗೂ ಸಾಮಾನ್ಯ ನಾಗರಿಕರಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಭಾರಿ ಪ್ರಮಾಣದಲ್ಲಿ ಬಲಪಡಿಸಲಾಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ PM-ABHIM ಹಾಗೂ 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ವಿವಿಧ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾಮಗಾರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಥಳ ಪರಿಶೀಲನೆ ನಡೆಸಿದರು.​ಈ ಯೋಜನೆಯ ಪ್ರಮುಖ ಮುಖ್ಯಾಂಶಗಳು ಹಾಗೂ ಸಾಧನೆಗಳು ಹೀಗಿವೆ:​

ಬೈಂದೂರಿನಲ್ಲಿ ₹5.20 ಕೋಟಿ ಯೋಜನಾ ವೆಚ್ಚ: ಹೆರೂರು, ಬಡಾಕೆರೆ, ನಾಡ, ಸೇನಾಪುರ, ಗುಜ್ಜಾಡಿ, ಗುಲ್ವಾಡಿ, ನೂಜಾಡಿ ಮತ್ತು ಹೊಸಂಗಡಿಯಲ್ಲಿ ತಲಾ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳು ನಿರ್ಮಾಣಗೊಳ್ಳುತ್ತಿವೆ. (ಹೆರೂರು ಮತ್ತು ನಾಡ ಉದ್ಘಾಟನೆಗೆ ಸಜ್ಜಾಗಿವೆ; ಸೇನಾಪುರ, ನೂಜಾಡಿ, ಹೊಸಂಗಡಿಯಲ್ಲಿ ಕೆಲಸ ಪ್ರಗತಿಯಲ್ಲಿದೆ).​

ನಮ್ಮ ಕ್ಲಿನಿಕ್ ಹಾಗೂ ಹೆಲ್ತ್ ಅಪ್‌ಗ್ರೇಡ್: ತಾರಾಪತಿ ಹಾಗೂ ವಸ್ತೆ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್’ ಲೋಕಾರ್ಪಣೆಯಾಗಿದ್ದು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್, ಆಕ್ಸಿಜನ್ ಘಟಕ ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಒದಗಿಸಲಾಗಿದೆ.​

ರಾಜ್ಯಕ್ಕೆ ಮೆಗಾ ಅನುದಾನ: 15ನೇ ಹಣಕಾಸು ಆಯೋಗದಿಂದ ₹1,683 ಕೋಟಿ ಹಾಗೂ PM-ABHIM ಅಡಿ ₹1,928.79 ಕೋಟಿ ಅನುದಾನ ಸಿಕ್ಕಿದ್ದು, 530 ಹೊಸ ಆರೋಗ್ಯ ಮಂದಿರಗಳು ಮತ್ತು 34 ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ.​

ಮಾತೃ ವಂದನಾ & ಆಯುಷ್ಮಾನ್: ಶಿವಮೊಗ್ಗದ 90,000ಕ್ಕೂ ಹೆಚ್ಚು ತಾಯಂದಿರಿಗೆ ನಗದು ನೆರವು ತಲುಪಿದ್ದು, ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ರಕ್ಷಣೆ ನೀಡಲಾಗುತ್ತಿದೆ.

[t4b-ticker]
error: Content is protected !!