ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಡ ಹಾಗೂ ಸಾಮಾನ್ಯ ನಾಗರಿಕರಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಭಾರಿ ಪ್ರಮಾಣದಲ್ಲಿ ಬಲಪಡಿಸಲಾಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ PM-ABHIM ಹಾಗೂ 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ವಿವಿಧ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾಮಗಾರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಥಳ ಪರಿಶೀಲನೆ ನಡೆಸಿದರು.ಈ ಯೋಜನೆಯ ಪ್ರಮುಖ ಮುಖ್ಯಾಂಶಗಳು ಹಾಗೂ ಸಾಧನೆಗಳು ಹೀಗಿವೆ:

ಬೈಂದೂರಿನಲ್ಲಿ ₹5.20 ಕೋಟಿ ಯೋಜನಾ ವೆಚ್ಚ: ಹೆರೂರು, ಬಡಾಕೆರೆ, ನಾಡ, ಸೇನಾಪುರ, ಗುಜ್ಜಾಡಿ, ಗುಲ್ವಾಡಿ, ನೂಜಾಡಿ ಮತ್ತು ಹೊಸಂಗಡಿಯಲ್ಲಿ ತಲಾ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳು ನಿರ್ಮಾಣಗೊಳ್ಳುತ್ತಿವೆ. (ಹೆರೂರು ಮತ್ತು ನಾಡ ಉದ್ಘಾಟನೆಗೆ ಸಜ್ಜಾಗಿವೆ; ಸೇನಾಪುರ, ನೂಜಾಡಿ, ಹೊಸಂಗಡಿಯಲ್ಲಿ ಕೆಲಸ ಪ್ರಗತಿಯಲ್ಲಿದೆ).

ನಮ್ಮ ಕ್ಲಿನಿಕ್ ಹಾಗೂ ಹೆಲ್ತ್ ಅಪ್ಗ್ರೇಡ್: ತಾರಾಪತಿ ಹಾಗೂ ವಸ್ತೆ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್’ ಲೋಕಾರ್ಪಣೆಯಾಗಿದ್ದು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್, ಆಕ್ಸಿಜನ್ ಘಟಕ ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಒದಗಿಸಲಾಗಿದೆ.
ರಾಜ್ಯಕ್ಕೆ ಮೆಗಾ ಅನುದಾನ: 15ನೇ ಹಣಕಾಸು ಆಯೋಗದಿಂದ ₹1,683 ಕೋಟಿ ಹಾಗೂ PM-ABHIM ಅಡಿ ₹1,928.79 ಕೋಟಿ ಅನುದಾನ ಸಿಕ್ಕಿದ್ದು, 530 ಹೊಸ ಆರೋಗ್ಯ ಮಂದಿರಗಳು ಮತ್ತು 34 ಕ್ರಿಟಿಕಲ್ ಕೇರ್ ಬ್ಲಾಕ್ಗಳ ನಿರ್ಮಾಣ ಪ್ರಗತಿಯಲ್ಲಿದೆ.
ಮಾತೃ ವಂದನಾ & ಆಯುಷ್ಮಾನ್: ಶಿವಮೊಗ್ಗದ 90,000ಕ್ಕೂ ಹೆಚ್ಚು ತಾಯಂದಿರಿಗೆ ನಗದು ನೆರವು ತಲುಪಿದ್ದು, ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ರಕ್ಷಣೆ ನೀಡಲಾಗುತ್ತಿದೆ.














































