ಗಣೇಶ ಮೆರವಣಿಗೆ ವೇಳೆ ಡಿ.ಜೆ. ನಿಷೇಧ: ಡಿಸಿ ಆದೇಶ ಉಲ್ಲಂಘಿಸಿ ಎಂದ ರೇಣುಕಾಚಾರ್ಯ

Picture of Savistara

Savistara

Bureau Report

ದಾವಣಗೆರೆ: ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಡಿ.ಜೆ. ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೊರಡಿಸಿದ ಆದೇಶವನ್ನು ಹಿಂದೂ ಯುವಕರು ಉಲ್ಲಂಘಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.

‘ಗಣೇಶೋತ್ಸವದಲ್ಲಿ ಡಿ.ಜೆ. ಬಳಸುವುದು ಹಿಂದೂಗಳ ಸಂಪ್ರದಾಯ. ಸುಪ್ರೀಂ ಕೋರ್ಟ್ ಕೂಡ ಡಿ.ಜೆ.ಗೆ ಅವಕಾಶ ಕಲ್ಪಿಸಿದೆ. ನ್ಯಾಯಾಲಯದ ಷರತ್ತುಗಳನ್ನು ಪಾಲಿಸಿ ಡಿ.ಜೆ. ಬಳಕೆಗೆ ಅವಕಾಶ ನೀಡಬೇಕು. ಸಂಪೂರ್ಣ ನಿಷೇಧ ಹೇರುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.’ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾವೇರಿ ಸೇರಿ ಹಲವು ಜಿಲ್ಲೆಗಳಲ್ಲಿ ಡಿ.ಜೆ. ಬಳಸಲು ಅವಕಾಶ ನೀಡಲಾಗಿದೆ. ಆದರೆ, ದಾವಣಗೆರೆಯಲ್ಲಿ ಇದಕ್ಕೆ ನಿಷೇಧ ಹೇರಲಾಗಿದೆ. ಇದನ್ನು ನೆಪವಾಗಿಟ್ಟುಕೊಂಡು ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ. ಹಿಂದೂ ಯುವಕರು ಡಿ.ಜೆ. ಬಳಸಿ ಶಕ್ತಿಯನ್ನು ಪ್ರದರ್ಶಿಸಬೇಕು’ ಎಂದರು.

ಮಾಜಿ ಸಚಿವ ಬಸವರಾಜ ನಾಯ್ಕ, ಎನ್.ರಾಜಶೇಖ‌ರ್, ಮಾಡಾಳ್ ಮಲ್ಲಿಕಾರ್ಜುನ, ಚಂದ್ರಶೇಖರ್ ಪೂಜಾರ್ ಹಾಜರಿದ್ದರು.

ಡಿ.ಜೆ ನಿಷೇಧಿಸಿದ ಜಿಲ್ಲಾಡಳಿತವು ಆಜಾನ್ ಕೂಡ ನಿಷೇಧಿಸಬೇಕು. ಪಿ.ಬಿ. ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಮಾಡುವ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕಬೇಕು.

–ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ

[t4b-ticker]
error: Content is protected !!