ಕಾಂಚನ್ ಮಾಲಕತ್ವದ ಹುಂಡೈ ಕಾರು ಪ್ರದರ್ಶನ ಮತ್ತು ಮಾರಾಟಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಡೆ |ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸುವಂತೆ ಅಗ್ರಹ

Picture of Savistara

Savistara

Bureau Report

ಮೊನ್ನೆ ಉಡುಪಿಯ ಸಾರ್ವಜನಿಕ ವೇದಿಕೆಯಲ್ಲಿ ಕಾಂಚನ್ ಹುಂಡೈನ ಮಾಲಕನಾದ ಪ್ರಸಾದ್ ಕಾಂಚನ್ ಎನ್ನುವ ವ್ಯಕ್ತಿ “ರಾಮ ಭಕ್ತರಿಗೆ ಚಪ್ಪಲಿಯಲ್ಲಿ ಹೊಡೆಯಿರಿ”ಎನ್ನುವ ಹೇಳಿಕೆಯನ್ನು ನೀಡಿದ್ದು, ಸಮಸ್ತ ರಾಮ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ.

ಈ ದಿನ ಸುಬ್ರಮಣ್ಯದ ಬಿಲದ್ವಾರದ ಬಳಿ ಪ್ರಸಾದ್ ಕಾಂಚನ್ ಮಾಲಕತ್ವದ ಹುಂಡೈ ಕಾರು ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿತ್ತು. ಈ ವಿಷಯ ತಿಳಿದ ಸುಬ್ರಹ್ಮಣ್ಯದ ಹಿಂದು ಪ್ರಮುಖರು ಸ್ಥಳಕ್ಕೆಆಗಮಿಸಿ, ಹೇಳಿಕೆಯನ್ನು ಖಂಡಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಸಮಸ್ತ ಹಿಂದೂ ರಾಮಭಕ್ತರ ಕ್ಷಮೆಯನ್ನು ಯಾಚಿಸುವಂತೆ ಆಗ್ರಹಿಸಿದ್ದಾರೆ. ತದನಂತರ ಪೊಲೀಸ್ ಠಾಣೆ ತೆರಳಿ ಮನವಿಯನ್ನು ಕೂಡ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಮುಖರದ ಡಾ. ರವಿ ಕಕ್ಕೆಪದವು, ಮೋನಪ್ಪ ಮಾನಾಡು, ದಿನೇಶ್ ಸಂಪ್ಯಾಡಿ, ಗಿರೀಶ್ ಪೈಲಾಜೆ, ದಿಲೀಪ್ ಉಪ್ಪಳಿಕೆ, ರಾಧಾಕೃಷ್ಣ ಅರ್ವರ್, ಯಶೋಧ ಕೃಷ್ಣ ನೂಚೀಲ, ಚಿದಾನಂದ ಕಂಡಡ್ಕ, ವೆಂಕಟೇಶ್ ಎಚ್ ಎಲ್, ಶೋಭಾ ಗಿರಿಧರ್, ಶೇಖರ್ ಅಗಲಿಕಜೆ , ಮನೀಶ್ ಪದೇಲ, ಕಿರಣ್ ಪೈಲಾಜೆ, ಯಶವಂತ ಕೊಪ್ಪಳಗದ್ದೆ ಶ್ರೀಕುಮಾರ್ ಬಿಲದ್ವಾರ,ಜಯರಾಮ್ ಹೆಚ್. ಎಲ್, ಮನೋಜ್ ಸುಬ್ರಹ್ಮಣ್ಯ, ರಾಮಚಂದ್ರ ಸುಬ್ರಹ್ಮಣ್ಯ ಹಾಗೂ ಇನ್ನು ಅನೇಕ ರಾಮಭಕ್ತರು ಉಪಸ್ಥಿತರಿದ್ದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

[t4b-ticker]
error: Content is protected !!