ಕಳಂಜದಲ್ಲೊಂದು ಮಕ್ಕಳ ಗಣಪ | ಗಣೇಶೋತ್ಸವಕ್ಕೆ ಹೊಸ ಮೆರುಗು

Picture of Savistara

Savistara

Bureau Report

ಸುಳ್ಯ: ಸುಳ್ಯ ತಾಲೂಕಿನ ಕಳಂಜ ಸ್ನೇಹ ನಗರದಲ್ಲಿ ಕಳೆದ ನಾಲ್ಕು ವರ್ಷ ಈಚೆಗೆ 14 ವರ್ಷದ ಪ್ರಣೀತ್ ಕುಮಾರ್ ತನ್ನ ತಾಯಿಯ ಅಂಗಡಿ ಬಳಿ ಗಣಪತಿ ವಿಗ್ರಹವನ್ನು ತಾನೇ ರಚಿಸಿ ಮೂರು ದಿನಗಳ ಕಾಲ ಮಕ್ಕಳ ಕೈಯಲ್ಲಿ ಅರ್ಚನೆ, ಪೂಜೆ ಸಲ್ಲಿಸಿ ಮಕ್ಕಳ ಜೊತೆಗೂಡಿ ವಿಗ್ರಹವನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.ಪ್ರಸ್ತುತ ಆಚರಣೆಗಳು ವೈಭವೀಕರಣ,ಹೊಸ ತಲೆಮಾರಿನ ಮಕ್ಕಳಲ್ಲಿ ಧಾರ್ಮಿಕತೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪ್ರಣೀತ್ ಕುಮಾರ್ ಮತ್ತು ಆತನ ಸ್ನೇಹಿತರ ಕಾರ್ಯ ಸಮಾಜಕ್ಕೆ ಅದರ್ಶವಾಗಿದೆ.

[t4b-ticker]
error: Content is protected !!