ವಿಶ್ವಸಂಸ್ಥೆ ಶಾಂತಿ ಕಾಪಾಡುವ ಸಂಸ್ಥೆಯಾಗಿ ಉಳಿದಿಲ್ಲ: ಭಾರತ

Picture of Savistara

Savistara

Bureau Report

ವಿಶ್ವಸಂಸ್ಥೆ: ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡುವ ಸಂಸ್ಥೆಯಾಗಿ ಉಳಿದಿಲ್ಲ. ಅದೀಗ ಸಮನಾಂತರವಾದ ಸೀಮಿತ ಗುಂಪಿನ ಚೌಕಟ್ಟುಗಳನ್ನು ಹೊಂದಿರುವ ಸಂಸ್ಥೆಯಾಗಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ ಎಂದು ಭಾರತ ಹೇಳಿದೆ.

‘ಎಲ್ಲ ರಾಷ್ಟ್ರಗಳು ಸಮಾನ ಮತ್ತು ಅಂತರರಾಷ್ಟ್ರೀಯ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎನ್ನುವ ವಿಶ್ವಸಂಸ್ಥೆಯ ಧೈಯಕ್ಕೀಗ ಚ್ಯುತಿ ಬಂದಿದೆ’ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಸೋಮವಾರ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಬಹಿರಂಗ ಚರ್ಚೆ ವೇಳೆ ಅವರು ಈ ಹೇಳಿಕೆ ನೀಡಿದರು.ಜಗತ್ತಿನ ಹಲವು ಭೌಗೋಳಿಕ ರಾಜಕೀಯ ಸಂಘರ್ಷವನ್ನು ನಿಲ್ಲಿಸುವಲ್ಲಿ ಹಾಗೂ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವಲ್ಲಿ ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಯಾದ ಭದ್ರತಾ ಮಂಡಳಿಯು ವಿಫಲವಾಗಿರುವಾಗಲೇ ಭಾರತ ಈ ಹೇಳಿಕೆ ನೀಡಿದೆ.ಇದರ ಪರಿಣಾಮವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ವಿಶ್ವಸಂಸ್ಥೆಗೆ ಪರ್ಯಾಯವಾಗಿ ‘ಬೋರ್ಡ್ ಆಫ್ ಪೀಸ್’ ರಚಿಸಿದ್ದಾರೆ. ಈ ಮಂಡಳಿಯ ಸದಸ್ಯರಾಗುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ.

[t4b-ticker]
error: Content is protected !!