ಕುಕ್ಕೆ :ರಾಜ್ಯದ ಮುಜರಾಯಿ ಒಳಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಕಾರ್ತಿಕ ಪೂಜೆಯ ಪ್ರಸಾದದಲ್ಲಿ ನೀಡಿದ ಬಾಳೆ ಹಣ್ಣು ಕೊಳೆತು ಕಜ್ಜಿ ಕಳೆ ಯಾಗಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೆಂಡರ್ ಮೂಲಕ ದೇವಸ್ಥಾನಕ್ಕೆ ಬಾಳೆ ಹಣ್ಣು ಪೂರೈಸಲಾಗುತ್ತಿದ್ದೂ ಆದರೆ ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ದಿನಕ್ಕೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಇಂತಹ ಕಜ್ಜಿ ಕಜ್ಜಿ ಬಾಳೆ ಹಣ್ಣು ನೀಡಿ ಭಕ್ತರ ಶ್ರದ್ದೆ, ನಂಬಿಕೆಗೆ ಧಕ್ಕೆಯಾಗಿದ್ದು ತಕ್ಷಣ ಸರಿಪಡಿಸುವಂತೆ ಭಕ್ತಾದಿಗಳು ಅಗ್ರಹಿಸಿದ್ದಾರೆ













































