ಬಿಇಎಂಎಲ್ ಟು ಕೊತ್ತನೂರು: ಪಿಂಕ್ ಲೈನ್ ಕನಸು ನನಸಾಗುವತ್ತ ಮತ್ತೊಂದು ಹೆಜ್ಜೆ

Picture of Savistara

Savistara

Bureau Report

ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಸಜ್ಜಾಗುತ್ತಿರುವ ನಮ್ಮ ಮೆಟ್ರೋ’ದ ವಿಸ್ತರಣಾ ಕಾರ್ಯ ಈಗ ಮಹತ್ವದ ಹಂತಕ್ಕೆ ತಲುಪಿದೆ. ಬಿಎಂಆರ್‌ಸಿಎಲ್‌ ಬಹುನಿರೀಕ್ಷಿತ ಪಿಂಕ್ ಲೈನ್ ಕಾರ್ಯಾಚರಣೆಯನ್ನು ಮೇ ತಿಂಗಳಲ್ಲಿ ಆರಂಭಿಸಲು ಭರದ ಸಿದ್ಧತೆ ನಡೆಸುತ್ತಿದೆ.ಈ ಮಾರ್ಗಕ್ಕಾಗಿ ಮೀಸಲಾದ ನಾಲ್ಕನೇ ರೈಲು ಸೆಟ್ ಕಳೆದ ಭಾನುವಾರ ಬೆಂಗಳೂರು ತಲುಪಿದೆ. ಬಿಇಎಂಎಲ್ ಸಂಸ್ಥೆಯ ನ್ಯೂತಿಪ್ಪಸಂದ್ರ ಘಟಕದಿಂದ ಆರು ಕೋಚ್‌ಗಳ ಈ ರೈಲನ್ನು ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಡಿಪೋಗೆ ಸುರಕ್ಷಿತವಾಗಿ ರವಾನಿಸಲಾಗಿದೆ. ಪ್ರಸ್ತುತ ಈ ರೈಲನ್ನು ತಾಂತ್ರಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಎಲ್ಲಾ ಸುರಕ್ಷತಾ ನಿಯಮಗಳ ಪಾಲನೆಯ ನಂತರ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.ಮೊದಲ ಹಂತ: ಸುಮಾರು 7.5 ಕಿ.ಮೀ ಉದ್ದದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ಮೇ ತಿಂಗಳಲ್ಲಿ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ.2025ರ ಡಿಸೆಂಬರ್‌ನಲ್ಲಿ ಮೊದಲ ರೈಲು ಬಂದಿದ್ದು, ಫೆಬ್ರವರಿಯಲ್ಲಿ ಎರಡು ರೈಲುಗಳು ಸೇರ್ಪಡೆಯಾಗಿದ್ದವು. ಈಗ ನಾಲ್ಕನೇ ರೈಲು ಕೂಡ ಬಂದಿರುವುದು ಸಿದ್ದತೆಗಳಿಗೆ ವೇಗ ನೀಡಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!