ಪಕ್ಷ ವಿರೋಧಿ ಚಟುವಟಿಕೆ ಆರೋಪ: ಸಂಸದ ಅಷ್ಟೇಕರ್‌ ಪುತ್ರ ಶಿವಸೇನಾದಿಂದ ಉಚ್ಚಾಟನೆ

Picture of Savistara

Savistara

Bureau Report

ಮುಂಬೈ : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಿನ್ನಮತೀಯ ಸಂಸದ ನಾಗೇಶ್ ಪಾಟೀಲ್ ಅಷ್ಟೇಕರ್ ಅವರ ಪುತ್ರ ಕೃಷ್ಣ ಪಾಟೀಲ್‌ ಅಷ್ಟೇಕ‌ರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಸೋಮವಾರ ತಿಳಿಸಿದರು.

ಕೃಷ್ಣ ಪಾಟೀಲ್‌ ಅವರು ಕಳೆದ ವಾರ ನಡೆದ ಮಹಾರಾಷ್ಟ್ರ ವಿಧಾನಪರಿಷತ್‌ ಚುನಾವಣೆಯಲ್ಲಿ ನಾಂದೇಡ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ವಿರುದ್ಧ ಬಂಡಾಯ ಎದ್ದಿರುವ ಆರು ಸಂಸದರಲ್ಲಿ ನಾಗೇಶ್ ಪಾಟೀಲ್‌ ಸಹ ಒಬ್ಬರು. ಉದ್ಧವ್‌ ಬಣ ತ್ಯಜಿಸಿ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯನ್ನು ಸೇರ್ಪಡೆಯಾಗಿರುವುದಾಗಿ ನಾಗೇಶ್ ಅವರು ತಿಳಿಸಿದ್ದಾರೆ.

ಭಿನ್ನಮತೀಯರ ವಿರುದ್ಧ ಆದಿತ್ಯ ಠಾಕ್ರೆ ವಾಗ್ದಾಳಿ

ಮುಂಬೈ: ಶಿವಸೇನೆ (ಉದ್ದ ಬಣ) ಶಾಸಕ ಆದಿತ್ಯ ಠಾಕ್ರೆ ಅವರುಭಿನ್ನಮತೀಯ ಸಂಸದರ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು. ‘ಮತದಾರರು ಎನ್‌ಡಿಎ ಅಭ್ಯರ್ಥಿಗಳನ್ನು ತಿರಸ್ಕರಿಸಿ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಆದರೆ ಅತಿ ಆಸೆಯಿಂದಾಗಿ ನಾಚಿಕೆಯಿಲ್ಲದೆ ರಾತ್ರೋರಾತ್ರಿ ಜನಾದೇಶವನ್ನು ತಿರಸ್ಕರಿಸಿ ಎನ್‌ಡಿಎ ಅಪ್ಪಿಕೊಂಡಿದ್ದಾರೆ’ ಎಂದು ಹರಿಹಾಯ್ದರು. ‘ಭಿನ್ನಮತೀಯರು ತಮ್ಮ ನಿಷ್ಠೆ ಮತ್ತು ಘನತೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಸರ್ಕಾರವು ಸಾರ್ವಜನಿಕ ನಿಧಿಯನ್ನು ರಾಜಕೀಯ ಉದ್ದೇಶಕ್ಕೆ ಪಕ್ಷಪಾತಿಯಾಗಿ ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು.

[t4b-ticker]
error: Content is protected !!