ಸುಳ್ಯ:ಕೆವಿಜಿ ಸಮೂಹ ಸಂಸ್ಥೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಆಡಳಿತ ವರ್ಗ ವತಿಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರೆವೇರಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ. ಕೆವಿ ಚಿದಾನಂದ, ಅಕ್ಷಯ್ ಕೆಸಿ, ಶೋಭಾ ಚಿದಾನಂದ,ಆಯುರ್ವೇದ ಕಾಲೇಜ್ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿವಿ, ಮೆಡಿಕಲ್ ಕಾಲೇಜ್ ಡಿನ್ ನೀಲಾಬಿಂಕಾ ನಟರಾಜ್, ಸಂಸ್ಥೆಯ ಸಿಬ್ಬಂದಿ ವರ್ಗ,
ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು. ಸಂಜೆ ಶೋಭಯಾತ್ರೆ ಮೂಲಕ ಗಣಪತಿ ಮೂರ್ತಿ ಭವ್ಯ ಮೆರವಣಿಗೆ ನಡೆದು ಮೂರ್ತಿಯ ವಿಸರ್ಜನೆ ನಡೆಯಲಿದೆ.

















































