ಮನೆತುಂಬಿದ ನೆಂಟರು: ದೆಹಲಿಯ ಅಂಗಳದಲ್ಲಿ ಬ್ರಿಕ್ಸ್ ಸಂಭ್ರಮ…

Picture of Savistara

Savistara

Bureau Report

ನಮ್ಮೂರ ಹಬ್ಬವೊಂದಕ್ಕೆ ಮನೆಯ ಹಿರಿಯರು, ದೂರದೂರಿನ ಸಂಬಂಧಿಕರೆಲ್ಲರೂ ಬಂದು ಸೇರಿಕೊಂಡಾಗ ಮನೆಯಲ್ಲಿ ಉಂಟಾಗುವ ಸಂಭ್ರಮವಿದೆಯಲ್ಲ, ಅದು ವರ್ಣನಾತೀತ. ಅಡುಗೆ ಮನೆಯಲ್ಲಿ ಒಲೆ ಧಗೆಯ ಜೊತೆಗೆ ನಗೆಯ ಹದ ಬೆರೆತು, ಮನೆಯ ಮೂಲೆಮೂಲೆಯೂ ಅತಿಥಿಗಳ ಕಳಕಳಿಯಿಂದ ಕಳೆಗಟ್ಟುತ್ತದೆ. ಅಚ್ಚರಿಯೆಂಬಂತೆ, ಇಂದು ನಮ್ಮ ವಿಶಾಲ ಭಾರತದ ಅಂಗಳವೂ ಅಕ್ಷರಶಃ ಅಂಥದ್ದೇ ಅತಿಥಿ ಸತ್ಕಾರದ ಸಂಭ್ರಮದಲ್ಲಿ ಮಿಂದೆದ್ದಿದೆ. ದೆಹಲಿಯ ರಾಜಪಥದ ಮಡಿಲಲ್ಲಿರುವ ಭವ್ಯ ‘ಭಾರತ ಮಂಟಪ’ದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯ ಸಡಗರ ಮನೆಮಾಡಿದ್ದು, ಜಾಗತಿಕ ಗಣ್ಯರೆಲ್ಲರೂ ನಮ್ಮನೆಯ ಅತಿಥಿಗಳಾಗಿ ಬಂದು ಸೇರಿದ್ದಾರೆ.

ವಿಶ್ವದ ಪ್ರಮುಖ ನಾಯಕರೆಲ್ಲರೂ ಒಂದೇ ಸೂರಿನಡಿ ಬಂದಿದ್ದಾರೆ. ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯನ್, ದಕ್ಷಿಣ ಆಫ್ರಿಕಾದ ಸಿರಿಲ್ ರಾಮಫೋಸಾ ಹಾಗೂ ಈಜಿಪ್ಟ್ನ ಅಬ್ದುಲ್‌ ಫತಾಹ್ ಎಲ್-ಸಿಸಿ ಅವರಂತಹ ದಿಗ್ಗಜರು ನಮ್ಮ ಅತಿಥಿಗಳಾಗಿ ಹೆಜ್ಜೆ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹಬ್ಬದ ಮನೆಯ ಯಜಮಾನನ ಜವಾಬ್ದಾರಿಯಂತೆ ಎಲ್ಲರನ್ನೂ ಮುಖಃತಾ ಸ್ವಾಗತಿಸಿ, ಜಾಗತಿಕ ಒಳಿತಿನ ದಾರಿಯ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸುತ್ತಿದ್ದಾರೆ.ಕುಟುಂಬದಲ್ಲಿ ಕಷ್ಟ-ಸುಖ ಹಂಚಿಕೊಂಡು ಮುಂದಿನ ದಾರಿಯನ್ನು ರೂಪಿಸಿಕೊಳ್ಳುವ ಹಿರಿಯರಂತೆ, ಇಲ್ಲಿಯೂ ಜಾಗತಿಕ ಆರ್ಥಿಕ ಅನಿಶ್ಚಿತತೆಗಳನ್ನು ಎದುರಿಸುವುದು ಹೇಗೆ ಎನ್ನುವ ಗಂಭೀರ ಚಿಂತನೆ ನಡೆಯುತ್ತಿದೆ.

ಕೇವಲ ಮಾತುಕತೆ ಮಾತ್ರವಲ್ಲದೆ, ಸ್ಥಳೀಯ ಕರೆನ್ಸಿಗಳಲ್ಲೇ ಪರಸ್ಪರ ವ್ಯಾಪಾರ ವಹಿವಾಟು ನಡೆಸುವ ಹೊಸ ಹೆಜ್ಜೆಯೂ ನಮ್ಮ ಮನೆಯ ಅಂಗಳದಿಂದಲೇ ಮೂಡಿಬರುತ್ತಿದೆ. ‘ಸ್ಥಳೀಯ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ’ ಎಂಬ ಧೈಯದೊಂದಿಗೆ, ನಾವೆಲ್ಲರೂ ಒಟ್ಟಾಗಿ ಬೆಳೆಯೋಣ ಎಂಬ ಸಂದೇಶವನ್ನು ಈ ಸಮಾವೇಶ ಸಾರುತ್ತಿದೆ.’ಭಾರತ್ ಇನ್ನೋವೇಟ್ಸ್’ ಪ್ರದರ್ಶನವನ್ನು ಒಟ್ಟಾಗಿ ವೀಕ್ಷಿಸುತ್ತಾ, ಜಂಟಿಯಾಗಿ ಗಿಡ ನೆಡುವ ಮೂಲಕ ಅತಿಥಿಗಳು ಮತ್ತು ಆತಿಥೇಯರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಬಂಧುಗಳು ಮನೆಗೆ ಬಂದಾಗ ಉಂಟಾಗುವ ಹರ್ಷ ಹೇಗೆ ನಮ್ಮ ಮನಸ್ಸಿಗೆ ಮುದ ನೀಡುತ್ತದೆಯೋ, ಹಾಗೆಯೇ ವಿಶ್ವದ ದೊಡ್ಡಣ್ಣಂದಿರೆಲ್ಲರೂ ನಮ್ಮ ಮನೆಗೆ ಬಂದು ಸ್ನೇಹದ ಹಸ್ತ ಚಾಚಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಕ್ಷಣ.

ನಮ್ಮೊಳಗಿನ ರಾಜಕೀಯ ಏನೇ ಇರಲಿ ಈ ನೆಂಟರ ಕೂಟ ನಮ್ಮ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!