ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಶುಕ್ರವಾರ, ದಿನಾಂಕ 18-09-2026 ರಂದು ವಿಶೇಷ ಶತರುದ್ರಾಭಿಷೇಕ ಮಹೋತ್ಸವ ಜರಗಲಿದೆ.ಶತರುದ್ರಾಭಿಷೇಕದಂತಹ ಪವಿತ್ರ ಕಾರ್ಯಕ್ಕೆ ಸುಮಾರು 1200 ಎಳನೀರು ಅಗತ್ಯವಿದ್ದು, ಸೀಮೆಯ ಎಲ್ಲಾ ಗ್ರಾಮಗಳ ಭಕ್ತರು ಕೈಜೋಡಿಸಬೇಕಾಗಿ ದೇವಸ್ಥಾನ ಭಕ್ತರ ವತಿಯಿಂದ ಭಕ್ತಿಪೂರ್ವಕ ಮನವಿ ಮಾಡಲಾಗಿದೆ.
ಭಕ್ತರಿಗೆ ಮನವಿ:ಪ್ರತಿ ಗ್ರಾಮದಿಂದ, ಪ್ರತಿ ಮನೆಯಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಎಳನೀರನ್ನು ಸಮರ್ಪಿಸಲು ಕೋರಲಾಗಿದೆ. ಕನಿಷ್ಠ 5 ರಿಂದ 10 ಎಳನೀರು ನೀಡುವಂತೆ ಮನವಿ ಮಾಡಲಾಗಿದ್ದು, 5 ಕ್ಕಿಂತ ಕಡಿಮೆ ಇದ್ದರೂ ಪರವಾಗಿಲ್ಲ. ತಮ್ಮ ಶಕ್ತ್ಯಾನುಸಾರ ಒಂದೆರಡು ಎಳನೀರನ್ನಾದರೂ ಶಿವನ ಸೇವೆಗೆ ಅರ್ಪಿಸಬಹುದು.”ನಾವು ಅರ್ಪಿಸುವ ಪ್ರತಿಯೊಂದು ಎಳನೀರೂ ಭಕ್ತಿಯ ಸಮರ್ಪಣೆಯಾಗಲಿ, ನಮ್ಮ ಪ್ರತಿಯೊಂದು ಮನೆಯ ಸೇವೆಯೂ ಶಿವನ ಪಾದಗಳಿಗೆ ಅರ್ಪಣೆಯಾಗಲಿದೆ” ಎಂದು ಆಯೋಜಕರು ತಿಳಿಸಿದ್ದಾರೆ.
ಭಕ್ತರು ಯಾರು ಎಷ್ಟು ಎಳನೀರು ನೀಡುತ್ತೀರಿ ಎಂಬುದನ್ನು ಗುರುವಾರ ಮಧ್ಯಾಹ್ನದೊಳಗೆ ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿಸಲಾಗಿದೆ. ಈ ಮಹಾಪುಣ್ಯ ಕಾರ್ಯದಲ್ಲಿ ಸೀಮೆಯ ಎಲ್ಲಾ ಭಕ್ತರು ಭಾಗವಹಿಸಿ ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಹೃದಯಪೂರ್ವಕ ಮನವಿ ಮಾಡಲಾಗಿದೆ.

















































