ನನ್ನ ಗುಂಡು ಯಾವಾಗಲೂ ಸಿದ್ಧವಾಗಿರುತ್ತದೆ…
ಭುಜ್: ‘ಶಾಂತಿಯಿಂದ ಬದುಕಿ, ಬದುಕಲು ಬಿಡಿ.ಇಲ್ಲದಿದ್ದರೆ, ನನ್ನ ಗುಂಡು ಯಾವಾಗಲೂ ಸಿದ್ಧವಾಗಿರುತ್ತದೆ” ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಗುಜರಾತ್ ನ ಭುಜ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ‘ಭ*ಯೋತ್ಪಾದನೆಯನ್ನು ರಾಜತಾಂತ್ರಿಕತೆಯ ಸಾಧನವಾಗಿ ಪಾಕಿಸ್ತಾನ ಪರಿಗಣಿಸುತ್ತಿದೆ. ಭಾರತ ಭ*ಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಹೊಂದಿದೆ’ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.”ಭಾರತ ಪ್ರವಾಸೋದ್ಯಮ ಆಧಾರಿತ ದೃಷ್ಟಿಕೋನ ಹೊಂದಿದೆ. ಪಾಕಿಸ್ತಾನದ್ದು ಭಯೋತ್ಪಾದನಾ ಕೇಂದ್ರಿತ ಮನಸ್ಥಿತಿ “ಭಾರತ ಪ್ರವಾಸೋದ್ಯಮದಲ್ಲಿ ನಂಬಿಕೆ ಇಡುತ್ತದೆ. ಪ್ರವಾಸೋದ್ಯಮ ಜನರನ್ನು ಒಟ್ಟುಗೂಡಿಸುತ್ತದೆ. ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನೇ ಪ್ರವಾಸೋದ್ಯಮ ಎಂದು ಭಾವಿಸುತ್ತದೆ. ಇದು ಜಗತ್ತಿಗೆ ದೊಡ್ಡ ಬೆದರಿಕೆಯಾಗಿದೆ” ಎಂದು ಮೋದಿ ಕಿಡಿ ಕಾರಿದರು.












































