ಕಲ್ಲಡ್ಕ ಫ್ಲೈ ಓವರ್ ಒನ್ ಲೈನ್ ನಾಲ್ಕು ದಿನಗಳಲ್ಲಿ ಪ್ರಯಾಣ ಸಂಚಾರಕ್ಕೆ ಮುಕ್ತ | ಜನಸಾಮಾನ್ಯರಿಗೆ ತೊಂದರೆಯಾಗದಂತೆ ತ್ವರಿತ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಕ್ಯಾ. ಚೌಟ

Picture of Savistara

Savistara

Bureau Report

ಮಂಗಳೂರು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಯ ಕಲ್ಲಡ್ಕ ಫ್ಲೈ ಓವನ ಒಂದು ಬದಿಯ ಎಲ್ಲಾ ಎಕ್ಸ್ಟೆನ್ಷನ್ ಪ್ಲೇಟ್ ಕಾಮಗಾರಿ ಮತ್ತು ಬ್ರಿಡ್ಜ್ ವೈಟ್ ಕ್ಯಾಪಿಸಿಟಿ ಟೆಸ್ಟಿಂಗ್ ಮುಗಿದಿದ್ದು ಇನ್ನು ಮೂರು ಅಥವಾ ನಾಲ್ಕು ದಿನದಲ್ಲಿ ಒಂದು ಲೇನ್ ಸಂಚಾರಕ್ಕೆ ಮುಕ್ತವಾಗಲಿದ್ದು , ಉಪ್ಪಿನಂಗಡಿ ಮಾಣಿ ಓವರ್ ಬ್ರಿಡ್ಜ್ ನ ಒಂದು ಬದಿ ಎರಡು ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.ಉಪ್ಪಿನಂಗಡಿ ಓವರ್ ಬ್ರಿಡ್ಜ್ ಒಂದು ಲೇನ್ ಒಂದು ವಾರದ ಒಳಗೆ ಸಂಚಾರಕ್ಕೆ ಮುಕ್ತವಾಗಲಿದ್ದುಮಾಣಿಯ ಮೂಲಕ ಪುತ್ತೂರು ಹೋಗುವವರಿಗೆ ಕೂಡ ಒಂದು ವಾರದಲ್ಲಿ ಸರ್ವಿಸ್ ರೋಡ್ ಓಪನ್ ಆಗಲಿದೆಯೆಂದು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿಯಲ್ಲಿ ಮಳೆಗಾಲ ಪ್ರಾರಂಭವಾಗಿದ್ದು ಸಾರ್ವಜನಿಕರು, ವಾಹನ ಸವಾರರು ಅನೇಕ ದಿನಗಳಿಂದ ಹೆದ್ದಾರಿ ಅವ್ಯವಸ್ಥೆಯಿಂದ ಪರಿತಾಪಿಸುತ್ತಿದ್ದು ಇದೀಗ ಕೊಂಚ ನಿರಾಳವಾಗಲಿದೆ, ಸಂಸದ ಕ್ಯಾ. ಬ್ರಿಜೇಶ್ ಚೌಟ ರಶ್ಯಾ ರಾಯಭಾರ ಪ್ರವಾಸದಲಿದ್ದರು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲಿದ್ದು ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಶೀಘ್ರ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು.

[t4b-ticker]
error: Content is protected !!